ಹುಬ್ಬಳ್ಳಿ:- ರಾಜ್ಯದಲ್ಲೇ ಕ್ರಾಂತಿ ನೆಲ ಕಿತ್ತೂರು ಯಾರಿಗೆ ಗೊತ್ತಿಲ್ಲಾ ಹೇಳ್ರಿ, ಇಂತಹ ಕ್ರಾಂತಿ ನೆಲ ಕಿತ್ತೂರು ತಾಲ್ಲೂಕಿನಲ್ಲಿ ಅತ್ಯಂತ ವೇಗವಾಗಿ ದಿನೇ ದಿನೇ ಬೆಳೆಯುತ್ತಿರುವ ಪಟ್ಟಣ ಅಂದ್ರೆ ಇದೇ ನೋಡ್ರಿ Mk ಹುಬ್ಬಳ್ಳಿ ಪಟ್ಟಣ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋದ್ರಿಂದ ದಿನನಿತ್ಯ ಅಪಘಾತಗಳು ಸೇರಿದಂತೆ ಹಲವಾರು ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.
ಇನ್ನೂ ಪ್ರಾದೇಶಿಕವಾಗಿ ಸಹ ಈ ಉಪ ಪೊಲೀಸ್ ಠಾಣೆ ತುಂಬಾ ದೊಡ್ಡದಿದ್ದು, ಮೊದಲಿನಿಂದಲೂ ಕಿತ್ತೂರು ಪೊಲೀಸ್ ವ್ಯಾಪ್ತಿಗೆ ಬರುತ್ತಿದ್ದು, ಅಪರಾಧ ಪ್ರಕರಣಗಳು ಸಂಭವಿಸಿದರೇ 18 ಕಿಲೋಮೀಟರ್ ದೂರದಲ್ಲಿರುವ ಕಿತ್ತೂರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಬೇಕಾಗುತ್ತದೆ.
ಇನ್ನೂ ಮಲಪ್ರಭಾ ನದಿಯು ಈ ಪಟ್ಟಣದ ವ್ಯಾಪ್ತಿಯಲ್ಲಿ ಬರುವದರಿಂದ ಇಲ್ಲಿಯವರೆಗೂ ಸಹ ಹಲವಾರು ಅನಾಹುತಗಳು ದಿನನಿತ್ಯ ಸಂಭವಿಸುತ್ತಿವೆ, ಇನ್ನೂ ಸರ್ಕಾರ ಇತ್ತೀಚೆಗೆ ರಾಮದುರ್ಗ ತಾಲ್ಲೂಕಿನ ಸುರೇಬಾನ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಪೊಲೀಸ್ ಠಾಣೆಯನ್ನಾಗಿ ಮಾಡಿದೆ.
ಆದ್ರೆ ಕಳೆದ 6 ವರ್ಷಗಳಿಂದ ಈ mk ಹುಬ್ಬಳ್ಳಿ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಪದೇ ಪದೇ ಸರ್ಕಾರಕ್ಕೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದ್ರೆ ಗೃಹ ಇಲಾಖೆ ಮಾತ್ರ ಕ್ಯಾರೇ ಎಂದಿಲ್ಲಾ, ಮೊದಲೇ mk ಹುಬ್ಬಳ್ಳಿ ಪಟ್ಟಣ ರಾಜ್ಯದ ಸೂಕ್ಷ ಪ್ರದೇಶಗಳ ಪೈಕಿ ಮುಂದಿದೆ. ಇದರಿಂದ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿಗಳು ಇಲ್ಲಿ ಅನಾಹುತಗಳು ಸಂಭವಿಸಿದ್ರೆ ಅದನ್ನು ತಡೆಗಟ್ಟಲು ಹರಸಾಹಸ ಪಡಬೇಕಾಗುತ್ತದೆ. ಮೊದಲೇ ಪೊಲೀಸ್ ಸಿಬ್ಬಂದಿಗಳ ಕೊರತೆಯಿಂದ ಕಂಗೆಟ್ಟಿರುವ ಪೊಲೀಸ್ ಅಧಿಕಾರಿಗಳು ಇಲ್ಲಿ ಪರಿಸ್ಥಿತಿ ಗಂಭೀರವಾದಾಗ ಬಂದೋಬಸ್ತ್ ಮಾಡಲು ಪ್ರತಿ ಬಾರಿಯೂ ಸಹ ಸುತ್ತಮುತ್ತಲ ಪೋಲಿಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕಾಗುತ್ತದೆ. ಇದರಿಂದ ವರ್ಷ ದಿಂದ ವರ್ಷಕ್ಕೆ ಪೊಲೀಸರಿಗೆ ತುಂಬಾನೇ ತಲೆನೋವಾಗಿ ಮಾರ್ಪಾಟ್ಟಿದೆ.