ಬೆಂಗಳೂರು ಐಪಿಎಲ್ 2024 ಟೂರ್ನಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಕ್ವಾಲಿಫೈಯರ್ 1 ಪಂದ್ಯಕ್ಕೆ ಅರ್ಹತೆ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಯಶಸ್ಸಿಗೆ ತಂಡದ ಮೆಂಟರ್ ಗೌತಮ್ ಗಂಭೀರ್ ಕಾರಣ ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಗಂಭೀರ್ ಮೆಂಟರ್ ಸ್ಥಾನ ಪಡೆದ ಬಳಿಕವಷ್ಟೇ ತಂಡದಲ್ಲಿನ ಸ್ಟಾರ್ ಆಟಗಾರರಾದ ಸುನೀಲ್ ನರೇನ್ ಮತ್ತು ಆಂಡ್ರೆ ರಸೆಲ್ ಅವರ ಪ್ರದರ್ಶನದಲ್ಲಿ ಏಳಿಗೆಯಾಗಿದೆ ಎಂದಿದ್ದಾರೆ.
2012 ಮತ್ತು 2014ರಲ್ಲೊ ಕೋಲ್ಕತಾ ನೈಟ್ ರೈಡರ್ಸ್ ತಂಡ ಗೌತಮ್ ಗಂಭೀರ್ ಸಾರಥ್ಯದಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಆ ತಂಡದ ಸದಸ್ಯರಾಗಿದ್ದರು. ಬಳಿಕ ಐಪಿಎಲ್ 2021 ಟೂರ್ನಿಯಲ್ಲಿ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದಾಗ ತಂಡದ ಯಶಸ್ಸಿನಲ್ಲಿ ಉತ್ತಪ್ಪ ಮಹತ್ವದ ಪಾತ್ರ ವಹಿಸಿದ್ದರು. ಈ ಇಬ್ಬರು ನಾಯಕರ ಅಡಿಯಲ್ಲಿ ತಮ್ಮ ಐಪಿಎಲ್ ವೃತ್ತಿಬದುಕು ಅರಳಿದ ಬಗ್ಗೆ ಉತ್ತಪ್ಪ ಮಾತನಾಡಿದ್ದಾರೆ.
NBCC Recruitment: ಪರೀಕ್ಷೆಯಿಲ್ಲದೆ NBCC ಕಾರ್ಪೊರೇಷನ್’ನಲ್ಲಿದೆ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
“ನಾಯಕತ್ವದ ವಿಚಾರದಲ್ಲಿ ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಒಂದೇ ಎಂದು ನಾನು ಸದಾ ಹೇಳಿಕೊಂಡು ಬಂದಿದ್ದೇನೆ. ವ್ಯಕ್ತಿತ್ವದ ವಿಚಾರದಲ್ಲಿ ಇಬ್ಬರು ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು. ಆದರೆ, ಒಬ್ಬ ನಾಯಕನ ವಿಚಾರಕ್ಕೆ ಬಂದರೆ ಇಬ್ಬರೂ ಒಂದೇ ಆಗಿದ್ದಾರೆ,” ಎಂದು ಜಿಯೋ ಸಿನೆಮಾ ಕಾರ್ಯಕ್ರಮದಲ್ಲಿ ರಾಬಿನ್ ಹೇಳಿದ್ದಾರೆ.