ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಳೆದ ಕೆಲ ತಿಂಗಳಿನಿಂದ ಮನೆ ಯಜಮಾನಿಗೆ ನೀಡುತ್ತಿದ್ದ ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಕೊಂಚ ವಿಳಂಬವಾಗಿತ್ತು.ಚುನಾವಣೆನೀತಿಸಂಹಿತೆಯಿಂದಾಗಿಜೂನ್ ತಿಂಗಳಗೃಹಲಕ್ಷ್ಮಿಹಣನೀಡುವುದು ಕೆಲ ದಿನಗಳ ಕಾಲ ತಡವಾಗಿತ್ತು. ಇದರಿಂದ ಗೃಹಿಣಿಯರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು.
ಆದರೆ ಕಳೆದ ತಿಂಗಳಿನ ಹಣ ಇಂದು ನಿಮ್ಮ ಖಾತೆಗೆ ಜಮೆಯಾಗಲಿದ್ದು ಈ ತಿಂಗಳ ಅಂದರೆ ಜುಲೈತಿಂಗಳ ಹಣ ಇದೇ 15ರೊಳಗೆಪಾವತಿಯಾಗಲಿದೆಎಂದುಮಹಿಳಾಮತ್ತುಮಕ್ಕಳಕಲ್ಯಾಣಸಚಿವೆಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದ್ದಾರೆ.
ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಆಧಾರ್ ಲಿಂಕ್ʼಗೆ ಸೆ.30ರವರೆಗೆ ವಿಸ್ತರಣೆ
2023ರ ಜುಲೈ ತಿಂಗಳಲ್ಲಿ ನೋಂದಣಿ ಆರಂಭವಾಯಿತು. ಆಗಸ್ಟ್ ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆ ಮಾಡಲಾಯಿತು. ಆರಂಭದಲ್ಲಿಈ ಯೋಜನೆಯಲ್ಲಿ 1.8 ಕೋಟಿ ಫಲಾನುಭವಿಗಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಲಕ್ಷಾಂತರ ಮಂದಿಯೂ ಈ ಯೋಜನೆಯ ಲಾಭ ಪಡೆದಿದ್ದರು.
ಇದೀಗ ಈ ಪೈಕಿ 1.78 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಇವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಜಿಎಸ್ಟಿ, ತೆರಿಗೆ ವ್ಯಾಪ್ತಿಗೆ ಬರುವ ಅರ್ಜಿದಾರರನ್ನು ಪರಿಶೀಲಿಸಿದ ನಂತರ ಇದೀಗ ರಾಜ್ಯದಲ್ಲಿ 1.23 ಕೋಟಿ ಫಲಾನುಭವಿಗಳಿದ್ದಾರೆ. ಶೀಘ್ರದಲ್ಲೇ ಜೂನ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಹಣ ಬರಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳಿದರು.
ಯೋಜನೆಯ ಆರಂಭದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಅಂದರೆ ಆಯಾ ಜಿಲ್ಲೆಗಳ ಸಿಇಒಗಳ ನೇತೃತ್ವದಲ್ಲಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುತ್ತಿತ್ತು. ಇದೀಗ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ 31 ಜಿಲ್ಲೆಗಳ ಫಲಾನುಭವಿಗಳಿಗೆ ಕೇಂದ್ರ ಕಚೇರಿ ಮೂಲಕವೇ ನೇರವಾಗಿ ಫಲಾನುಭವಿಗಳಿಗೆ 2 ಸಾವಿರ ರೂ. ವರ್ಗಾವಣೆ ಮಾಡಲಾಗುವುದು. ಗೃಹಲಕ್ಷ್ಮಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಚುಣಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜೂನ್ ತಿಂಗಳ ಹಣ ಬಿಡುಗಡೆ ಸ್ವಲ್ಪ ತಡವಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದ್ದಾರೆ.