ಬೆಂಗಳೂರು : ಪರೀಕ್ಷೆಗಾಗಿ ತಾಳಿ ತೆಗೆಸಿದವರು ನೀವು.. ತಾಳಿ ತೆಗೆಯೋದು ವಿಧವೆ ಮಾತ್ರ.. ನಿಮಗೆ ನಾಚಿಕೆ ಆಗಲ್ವಾ? ಇದು ಯಾವ ಸಂಸ್ಕೃತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತವರೂರು ಕಲಬುರ್ಗಿಯಲ್ಲಿ ನಡೆದ ಘಟನೆ ವಿರುದ್ಧ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿ ತಾಳಿ ತೆಗೆಸುತ್ತೀರಾ? ನಿಮ್ಮ ಮನೆಯಲ್ಲಿ ಹೀಗೆ ಮಾಡೋಕೆ ಆಗತ್ತಾ? ತಾಳಿ, ಉಂಗುರ ತೆಗೆಸಿದದವರ ಮೇಲೆ ಕ್ರಮ ಆಗಬೇಕು. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ತಾಳಿ ತೆಗೆಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಹೆಣ್ಣುಮಕ್ಕಳಿಗೆ ಅವಮಾನ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಯೋಜನೆಗಳಿಗೆ ಹಣ ನೀಡಲಿದೆ. ನಾವು ಎಲ್ಲೂ ಅನುದಾನ ನಿಲ್ಲಿಸಿಲ್ಲ. ರಾಜ್ಯ, ಕೇಂದ್ರದ ಷೇರಿನ ಹಣ ಕೊಡ್ತಿದ್ದೇವೆ. ವಿದ್ಯಾರ್ಥಿ ವೇತನದ ಸಮಸ್ಯೆಯಿಲ್ಲ. ಸ್ಕ್ಯೂಟಿನಿ ಮಾಡುವುದು ವಿಳಂಬವಾಗ್ತಿದೆ. 395 ಕೋಟಿ ರೂಪಾಯಿ ಹಣವನ್ನ ಇದಕ್ಕೆ ನೀಡಲಾಗ್ತಿದೆ ಎಂದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)