ಬೆಂಗಳೂರು: ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಮುಖ್ಯ ಆರೋಪಿಗಳಾಗಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪಿಗಳ ಹೇಳಿಕೆ ದಾಖಲಿಸಿದ ಪೊಲೀಸ್ರು, ಆರೋಪಿ ದರ್ಶನ್ ,ಹಾಗೂ ಪವಿತ್ರಗೌಡ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿದ್ದಾರೆ. ಸ್ಪಾಟ್ ಮಹಜರ್ ಮುಗಿದ ಬಳಿಕ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿದ ಪೊಲೀಸ್ರು.
ಹಾಗಾದ್ರೆ ಕೊಲೆ ಆರೋಪಿಗಳ ಎಕ್ಸ್ ಕ್ಲುಸೀವ್ ಸ್ಟೇಟ್ ಮೆಂಟ್.
ಎ1 . ಪವಿತ್ರ ಗೌಡ
- ರೇಣುಕಸ್ವಾಮಿ ಅಶ್ಲೀಲ ಫೋಟೊ ಮೆಸೇಜ್ ಗಳನ್ನ ಪವನ್ ಗೆ ಕಳಿಸಿದ್ದೆ
- ದರ್ಶನ್ ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಹೇಳಿದ್ದೆ
- ದರ್ಶನ್ ಗೆ ಈ ವಿಚಾರ ಗೊತ್ತಾದ್ರೆ ಏನಾದ್ರು ಅನಾಹುತ ಆಗಬಹುದು ಅಂತಾ ಹೇಳಿದ್ದೆ
- ನಂಗೆ ಕೊಲೆ ಮಾಡ್ತಾರೆ ಅಂತಾ ಸಣ್ಣ ಕಲ್ಪನೆಯೂ ಇರಲಿಲ್ಲ
- ಅಶ್ಲೀಲ ಮೆಸೇಜ್ ಮಾಡಿದ್ನಲ್ಲಾ ಅಂತಾ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ
- ಕೊಲೆ ಮಾಡ್ತಾರೆ ಅಂದ್ರೆ ನಾನೆ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ
ಎ2 ದರ್ಶನ್
- ಪವನ್ ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು
- ರೇಣುಕಾಪ್ರಸಾದ್ ನನ್ನ ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ
- ಶನಿವಾರ ಸಂಜೆ ರೇಣುಕಾಪ್ರಸಾದ್ ನ ಶೆಡ್ ನಲ್ಲಿ ಭೇಟಿಯಾದೆ
- ಇನ್ನೊಂದ್ ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಅಂತಾ ವಾರ್ನ್ ಮಾಡಿದೆ
- ದುಡ್ಡು ಕೊಟ್ಟು ಊಟ ಮಾಡ್ಕೊಂಡ್ ಊರು ಸೇರುವಂತೆ ಹೇಳಿ ಹೊರಟೋದೆ
- ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಅಂತಾ ಸ್ಟೇಟ್ ಮೆಂಟ್
ಎ3 ಪವನ್
- ರೇಣುಕಾಪ್ರಾಸದ್ ಪವಿತ್ರ ಅಕ್ಕನಿಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ
- ಅಕ್ಕ, ಇದ್ಯಾರು ಪತ್ತೆ ಮಾಡು ಅಂತಾ ಹೇಳಿದ್ರು
- ಪವಿತ್ರ ಗೌಡ ಹೆಸರಲ್ಲಿ ರೇಣುಕಸ್ವಾಮಿ ಜೊತೆ ಚಾಟ್ ಮಾಡ್ತಾ ಮಾಡ್ತಾ ಮೊಬೈಲ್ ನಂ ಪಡೆದುಕೊಂಡೆ
- ನಾನು ವಿಚಾರವನ್ನ ದರ್ಶನ್ ಗೆ ಹೇಳಿದೆ
- ಆ ಬಳಿಕ ರೇಣುಕಾಸ್ವಾಮಿಯನ್ನ ಕರೆಸಿ ಶೆಡ್ ನಲ್ಲಿ ಎಲ್ಲರೂ ಸೇರಿ ಹಲ್ಲೆ ನಡೆಸಿದ್ವಿ
- ರೇಣುಕಾಸ್ವಾಮಿ ಮೂರ್ಚೆ ಹೋಗಿರಬಹುದು ಅನ್ಕೊಂಡೊ. ಆದ್ರೆ ಸತ್ತು ಹೋಗಿದ್ರು.
- ಭಯ ಹುಟ್ಟಿಸಬೇಕು ಸಾಯಿಸುವ ಉದ್ದೇಶವಿರಲಿಲ್ಲ ಅಂತಾ ಪವಮ್ ನಿಂದ ಸ್ಟೇಟ್ ಮೆಂಟ್
ಎ4 ರಾಘವೇಂದ್ರ
- ಚಿತ್ರದುರ್ಗ ತೂಗದೀಪ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದೇನೆ
- ದರ್ಶನ್ ಸಾರ್ ಒಂದು ನಂಬರ್ ಕೊಟ್ಟು ಈ ವ್ಯಕ್ತಿಯನ್ನ ಪತ್ತೆ ಮಾಡುವಂತೆ ಹೇಳಿದ್ರು
- ನಂಬರ್ ಸಿಕ್ಕಿದ್ರಿಂದ ರೇಣುಕಾಸ್ವಾಮಿಯನ್ನ ಆರಾಮಾಗಿ ಪತ್ತೆ ಮಾಡಿದ್ದೆ
- ರೇಣುಕಾಸ್ವಾಮಿಯನ್ನ ೨ ದಿನ ವಾಚ್ ಮಾಡಿ ಫಾರ್ಮಿಸಿಗೆ ಬರುವ ವೇಳೆ ಮಾತನಾಡಬೇಕು ಅಂತಾ ಕರೆದುಕೊಂಡು ಬಂದೆ
- ಶನಿವಾರ ಮೂರು ಗಂಟೆ ವೇಳೆಗೆ ಪಟ್ಟಣಗೆರೆಯ ವಿನಯ್ ಶೆಡ್ ಒಳಗೆ ಕರೆದುಕೊಂಡು ಹೋದೆ
- ಅಷ್ಟರಲ್ಲಿ ಅಲ್ಲಿ ಆಗಾಗಲೆ ಸಾಕಷ್ಟು ಜನ ಇದ್ದು ರೇಣುಕಾಸ್ವಾಮಿಯನ್ನ ನೋಡಿದ ಕೂಡಲೆ ಹಲ್ಲೆ ಮಾಡಿದ್ರು
- ನಮ್ಮ ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತೀಯೇನೊ ಅಂತಾ ಎಲ್ರೂ ಸೇರಿ ಹೊಡೆದ್ವಿ
- ಸತ್ತು ಹೋಗ್ತಾನೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಸ್ಟೇಟ್ ಮೆಂಟ್
ಎ5 ನಂದೀಶ್
- ಅಶ್ಲೀಲ ಮಸೇಜ್ ಮಾಡ್ತಿರೋನ ಪತ್ತೆ ಮಾಡುವಂತೆ ಬಾಸ್ ಹೇಳಿದ್ರು
- ಹೀಗಾಗಿ ರಾಘವೇಂದ್ರ ಜೊತೆ ಕೊಆರ್ಡಿನೇಟ್ ನಲ್ಲಿದ್ದೆ
- ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನ ಕರೆತಂದ್ರು
- ಪಟ್ಟಣಗೆರೆಯ ವಿನಯ್ ಶೆಡ್ ಗೆ ರೇಣುಕಸ್ವಾಮಿಯನ್ನ ಕರೆತರಲಾಯ್ತು
- ಮೊದಲೇ ಅಲ್ಲಿದ್ದ ಹುಡುಗರು ರೇಣುಕಸ್ವಾಮಿಯನ್ನ ನೋಡ್ತಿದ್ದ ಹಾಗೆ ಹಲ್ಲೆ ನಡೆಸಿದ್ರು
- ಕೈ ಬಾಯಿ , ಮೈ ನಲ್ಲಿ ರೇಣುಕಸ್ವಾಮಿಗೆ ರಕ್ತ ಬಂತು
- ಸಂಜೆ 6-30 ರ ಸುಮಾರಿಗೆ ರೇಣುಕಸ್ವಾಮಿ ಉಸಿರಾಡ್ತಿರಲಿಲ್ಲ
- ಸಾವನ್ನಪ್ಪಿರಬಹದು ಅಂತಾ ಅಲ್ಲಿದ್ದವರೆಲ್ಲಾ ಭಯಗೊಂಡೆವು..