ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಹಾಗೂ ಇತರರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ಬಾಚಿದ್ರೆ ಕೈ ತುಂಬಾ ಕೂದಲು ಬರುತ್ತಾ!?.. ಈ ಎಣ್ಣೆಯನ್ನು ಹೀಗೆ ಬಳಸಿ..!
ಇದೇ ವಿಚಾರವಾಗಿ ದರ್ಶನ್ ಪರ ವಕೀಲರು ಮಾತನಾಡಿ, ಪೊಲೀಸರು ಆರೋಪಿಗಳನ್ನು 6 ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆದಿದ್ದರು, ಒಂದು ದಿನ ಮುಂಚಿತವಾಗಿಯೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಹೀಗಾಗಿ ಮತ್ತೆ ಕಸ್ಟಡಿಗೆ ಪಡೆಯುವುದಿಲ್ಲ ಎಂದು ನಾವು ತಿಳಿದಿದ್ದೆವು. ಆದರೆ ಮತ್ತೆ ಅವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು, ಪೊಲೀಸರು ತಮಗೆ ತೊಂದರೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಪೊಲೀಸರು ಮೈಸೂರಿನಲ್ಲಿ ಮಹಜರು ಮಾಡಬೇಕು, ಆರೋಪಿಗಳ ಬಟ್ಟೆಗಳನ್ನು, ಚಪ್ಪಲಿಗಳನ್ನು ವಶಕ್ಕೆ ಪಡೆಯಬೇಕು ಎಂದೆಲ್ಲ ಕಾರಣಗಳನ್ನು ನೀಡಿದ್ದಾರೆ. ಆದರೆ ಇದ್ಯಾವುದೂ ಸಹ ದರ್ಶನ್ಗೆ ಸಂಬಂಧಿಸಿದ್ದಲ್ಲ. ಅಲ್ಲದೆ ಎಲ್ಲ ಆರೋಪಿಗಳನ್ನು ಏಕೆ ವಶಕ್ಕೆ ಪಡೆಯಬೇಕು ಎಂದು ಪೊಲೀಸರು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ’ ಎಂಬುದನ್ನು ನಾವು ನ್ಯಾಯಾಲಯದಲ್ಲಿ ಉಲ್ಲೇಖಿಸಿದೆವು ಎಂದು ದರ್ಶನ್ ಪರ ವಕೀಲ ರಂಗನಾಥ ರೆಡ್ಡಿ ಹೇಳಿದರು
ಆರೋಪಿಗಳ ಮೊಬೈಲ್ ಡಾಟಾ ರಿಕವರಿ ಬಗ್ಗೆಯೂ ಪೊಲೀಸರು ಉಲ್ಲೇಖಿಸಿದ್ದಾರೆ. ಆದರೆ ಮೊಬೈಲ್ ಮಾಹಿತಿಯ ಬಗ್ಗೆ ಈ ಹಿಂದಿನ ಕೆಲವು ವರದಿಗಳನ್ನು ಉಲ್ಲೇಖಿಸಿ ನಾವು ನ್ಯಾಯಾಧೀಶರಿಗೆ ಮನವಿ ಮಾಡಿದೆವು, ಆರೋಪಿಗಳು ಮೊಬೈಲ್ ಪಾಸ್ವರ್ಡ್ ನೀಡುವಂತೆ ಒತ್ತಾಯಿಸುವಂತಿಲ್ಲವೆಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಂಡೆವು. ಪೊಲೀಸರು ಒಂಬತ್ತು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದೆವು. ಆದರೆ ನಾವು ಹೈಕೋರ್ಟ್ನ ಕೆಲವು ಆದೇಶಗಳನ್ನು ತೀರ್ಪುಗಳನ್ನು ಉಲ್ಲೇಖಿಸಿ ತಕರಾರು ಸಲ್ಲಿಸಿದ ಬಳಿಕ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ’ ಎಂದಿದ್ದಾರೆ.