ಪಾಕಿಸ್ತಾನ: ನಮ್ಮ ನೆರೆ ಹೊರೆಯ ದೇಶಗಳು ಚಂದ್ರನನ್ನು ತಲುಪಿವೆ. ಆದರೆ ಪಾಕಿಸ್ತಾನ ದೇಶವು ಇನ್ನೂ ಭೂಮಿಯಿಂದ ಮೇಲೇ ಏಳುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ. ಪದೇ ಪದೇ ಭಾರತದ ಸಾಧನೆಗಳನ್ನು ಹೊಗಳುತ್ತಿರುವ ನವಾಜ್ ಷರೀಫ್, ಇದೀಗ ಮತ್ತೊಮ್ಮೆ ಭಾರತವನ್ನು ಹೊಗಳಿ ಅಲ್ಲಿನ ಮಿಲಿಟರಿ ಮುಖ್ಯಸ್ಥರ ಕೆಂಗಣ್ಣಿಗೆ ತುತ್ತಾಗಿದ್ದಾರೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ತಮ್ಮ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್, ಪಾಕಿಸ್ತಾನ ದೇಶದ ಹೀನಾಯ ಆರ್ಥಿಕ ಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಾಕಿಸ್ತಾನದ ಆರ್ಥಿಕ ಕುಸಿತಕ್ಕೆ ಬೇರೆ ಯಾರೂ ಕಾರಣರಲ್ಲ. ಖುದ್ದಾಗಿ ನಾವೇ ನಮ್ಮ ಆರ್ಥಿಕ ದುಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ಹೇಳಿದರು.
ರಾಜ್ಯದಲ್ಲಿ ರೂಪಾಂತರಿ ಕರೋನಾ ಆತಂಕ -ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆ!
ನಮ್ಮ ನೆರೆ ಹೊರೆ ದೇಶಗಳು ಆಗಲೇ ಚಂದ್ರನನ್ನು ತಲುಪಿವೆ. ನಾವು ಇನ್ನೂ ಭೂಮಿಯ ಮೇಲಿಂದಲೇ ಏಳಲು ಆಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ನವಾಜ್ ಷರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಈ ಕುಸಿತಕ್ಕೆ ನಾವೇ ಹೊಣೆ. ಇಲ್ಲವಾದರೆ ನಮ್ಮ ದೇಶವು ಬೇರೆಯೇ ಸ್ಥಾನದಲ್ಲಿ ಇರುತ್ತಿತ್ತು ಎಂದು ನವಾಜ್ ಷರೀಫ್ ಹೇಳಿದ್ದಾರೆ.