ಮಂಡ್ಯ: ನಾವೇನು ಭಿಕ್ಷೆ ಕೇಳ್ತಿಲ್ಲ, ನಮ್ಮ ಹಕ್ಕನ್ನ ಕೇಳ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ. ಕರ್ನಾಟಕ ತೆರಿಗೆ ಕೊಡುವುದರಲ್ಲಿ ನಂಬರ್ 2. ಆದ್ರೆ ಕೇಂದ್ರದಿಂದ ಬರುವ ಹಣದಲ್ಲಿ ನಮ್ಮ ಕೊನೆಯಲ್ಲಿದೆ ಎಂದರು. ಇನ್ನೂ ಮುಖ್ಯಮಂತ್ರಿ ಆಗುವವರು ಕರ್ನಾಟಕಕ್ಕೆ ಮೊದಲು ನ್ಯಾಯ ಕೊಡಲಿ,
ರೈತರೇ ಗಮನಿಸಿ.. ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಸೇರಲ್ಲ ಪಿಎಂ ಕಿಸಾನ್ ಹಣ!
ಮಾನ್ಯ ಕುಮಾರಸ್ವಾಮಿ ಸರ್ಕಾರ ಬೀಳಿಸುವ ಜೊತೆಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಮೇಕೆದಾಟಿಗೆ ಒಂದೆ ದಿನದಲ್ಲಿ ಸಹಿ ಹಾಕಿಸುತ್ತೇನೆ ಎಂದಿದ್ರು. ಸರ್ಕಾರ ಬಂದು 6 ತಿಂಗಳು ಕಳೆಯುತ್ತಿದೆ ಯಾಕೆ ಇನ್ನೂ ಮೇಕೆದಾಟುಗೆ ಅನುಮತಿ ಕೊಟ್ಟಿಲ್ಲ, ಅಪ್ಪರ್ ಭದ್ರ ಯೋಜನೆಗೆ 5300 ಕೋಟಿ ಕೊಡಬೇಕು. ಆದ್ರೆ 53 ಪೈಸೆಯನ್ನ ಕೊಟ್ಟಿಲ್ಲ. ಸರ್ಕಾರ ಬೀಳಿಸಿದ್ರೆ ಅಧಿಕಾರ ಸಿಗಬಹುದು. ಆದ್ರೆ ಮೇಕೆದಾಟುಗೆ ಸಹಿ ಹಾಕಿಸಿಕೊಡಿ ಜನ ನಿಮಗೆ ಒಳ್ಳೆಯದು ಮಾಡ್ತಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.