ಬಳ್ಳಾರಿ: ಮೋದಿ ಅಲೆಯಿಂದ ಯಡಿಯೂರಪ್ಪ ಶಕ್ತಿಯಿಂದ ನಮಗೆ ಗೆಲುವಾಗುತ್ತೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ. ನಾಮಪತ್ರ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಮೋದಿ 400 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ, ಅದರಲ್ಲಿ ಬಳ್ಳಾರಿ ಕ್ಷೇತ್ರವೂ ಒಂದು, ಈಗಾಗಲೇ ಎಲ್ಲ ಕಡೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ, ನಾಳೆಯುಂದ ಎರಡನೇ ಸುತ್ತಿನ ಪ್ರಚಾರ ಆರಂಭಿಸುವೆ,
ಎಲ್ಲರು ಒಗ್ಗಟ್ಟಿನಿಂದ ನಾವು ಗೆಲ್ಲುತ್ತೇವೆ ಎಂದು ಹೇಳಿದರು. ಇನ್ನೂ ಕಳೆದ ಚುನಾವಣೇಲಿ ನಾನು ಸೋತಿದ್ದೆ, ಆದರೂ ಕೂಡ ಪಾರ್ಟಿ ನನಗೆ ಅವಕಾಶ ಕೊಟ್ಟಿದೆ. ನಾನು ಸೋತಿದ್ದಕ್ಕೆ ಎಲ್ಲರಿಗೂ ಅನುಕಂಪ ಇದೆ. ಜನಾರ್ಧನರ್ ರೆಡ್ಡಿಯವರು ಕೂಡ ನಮಗೆ ಒಟ್ಟಾಗಿದ್ದಾರೆ ಎಂದರು.
![Demo](https://ainlivenews.com/wp-content/uploads/2023/12/spoorthi-1.jpg)
ಜನಾರ್ಧನ್ ರೆಡ್ಡಿಯೇ ಶ್ರೀರಾಮುಲು ಸೋಲಿಸ್ತಾರೆ ಎಂದಿದ್ದ ಭೀಮಾನಾಯ್ಕ್ ಹೇಳಿಕೆಗೆ ಬಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಯಾರು ಯಾರನ್ನು ಮನೆಗೆ ಕಳುಹಿಸ್ತಾರೆ ಗೊತ್ತಾಗುತ್ತೆ, ಇಂಡಿಯಾ ಒಕ್ಕೂಟ ಈಗಾಗಲೇ ಸೋತು ಹೋಗಿದೆ, ನಾವೆಲ್ಲ ಒಡೆದು ಹೋದ್ರೆ ಗೆಲ್ತಿವಿ ಅನ್ನೋ ಭ್ರಮೆ ಇತ್ತು, ಈಗ ನಾವು ಒಂದಾಗಿರೋದು ಅವರಿಗೆ ಭಯ ಹುಟ್ಟಿಸಿದೆ. ಮತಿ ಭ್ರಮಣೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)