ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಬಡವರ, ಮಧ್ಯಮ ವರ್ಗ, ರೈತರ ಕಾರ್ಮಿಕರ, ನಿರುದ್ಯೋಗಿ ಯುವಕರ ಮತ್ತು ಶೋಷಿತರ ಹೃದಯದಲ್ಲಿರುವ ಜನನಾಯಕ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಯೋಜನೆಗಳನ್ನು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿಯವರು ಬಿಟ್ಟಿ ಯೋಜನೆ ಕೊಟ್ಟಿದ್ದಾರೆಂದು ಹೇಳಿದದರು. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು.
ಪಾಕಿಸ್ತಾನ ಶ್ರೀಲಂಕಾ ಆಗುತ್ತದೆ ಎಂದು ಆದರೆ ಆಯ್ತಾ ಎಂದು ಪ್ರಶ್ನಿಸಿದರು. ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟ ಪಡುವಂತಹ ಜನರಿಗೆ ಅವರ ಕಣ್ಣೀರೊರೆಸುವ ಕೆಲಸವನ್ನು ಐದು ಭಾಗ್ಯಗಳನ್ನು ನೀಡುವ ಮೂಲಕ ಮಾಡಿದ್ದೇವೆ. ಇಂತಹ ಯೋಜನೆಗಳನ್ನು ತಂದುಕೊಟ್ಟಿದ್ದೆನೆ, ನೇರವಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ. ವಿರೋಧ ಪಕ್ಷದವರು ನಿಮಗೇನು ಕೊಟ್ಟಿಲ್ಲ, ನೀವು ನನ್ನ ಕೈ ಬಲ ಪಡಿಸಿ, ನಿಮ್ಮ ಮೇಲಿನ ನಂಬಿಕೆಯಿಂದ ಚುನಾವಣೆಯಲ್ಲಿದ್ದೇನೆ, ಮುಖ್ಯ ಮಂತ್ರಿಯಾಗಿದ್ದೇನೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ತಿಂಗಳಿಗೆ 12,400 ರೂ. ಸ್ಕಾಲರ್ ಶಿಪ್..! ಇಂದೇ ಅರ್ಜಿ ಸಲ್ಲಿಸಿ
ನನ್ನ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಹೆಚ್ಚು ಶಕ್ತಿ ನೀಡಿ,ಇನ್ನಷ್ಟು ಯೋಜನೆ ರೂಪಿಸುವ ಹಾಗೂ ಹೆಚ್ಚು ಬಡವರಿಗೆ ಸಹಾಯ ಮಾಡುವ ಅವಕಾಶ ನೀಡಬೇಕು ಎನ್ನುವ ಧಾಟಿಯಲ್ಲಿ ಹೇಳಿದ್ದಾರೆಯೇ ಹೊರೆತು ಬೇರೆ ಯಾವ ಉದ್ದೇಶವಿಲ್ಲ. ರಾಜ್ಯದಲ್ಲಿ 15 ರಿಂದ 20 ಸ್ಥಾನಗಳನ್ನು ಗೆಲ್ಲುತ್ತೇವೆ ಯಾವ ಸಂಶಯ ಬೇಡ, ಕಡಿಮೆ ಬರುವುದಾಗಲಿ ಅವರು ಬದಲಾಗುವ ಪ್ರಶ್ನೆಯಾಗಲಿ ಬರುವುದಿಲ್ಲ ಎಂದು ಹೇಳಿದರು.