ಕೊಪ್ಪಳ: ಮುನಿರತ್ನ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳ ತಾಲೂಕಿನ ಗಿಣಗೇರಾ ಏರಸ್ಟ್ರಿಪ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಮ್ಮಲ್ಲಿ ಬೇರೆ ರಾಜ್ಯಕ್ಕಿಂತ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದ್ದರು. ಮಾಗಡಿಯಲ್ಲಿ ಶಾಸಕರು, ರೈತರು ಕೇಳಿದ್ದರು. ಒಂದು ವೇಳೆ ಜಾಸ್ತಿ ಮಾಡಿದ್ರೆ ಅದನ್ನು ರೈತರಿಗೆ ಕೊಡಬೇಕು ಎಂದು ಹೇಳಿದ್ದೇನೆ.
ಮುನಿರತ್ನ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡಲ್ಲ. ಅಪೆನ್ಸ್ ಮಾಡುವಂತೆ ನಾವು ಹೇಳಿದ್ದೇವಾ. ಅನೇಕ ಶಾಸಕರು ಬಂದ ಎಸ್ ಐ ಟಿ ಮಾಡುವಂತೆ ಹೇಳಿದ್ದರು. ಅವರ ಮೇಲೆ ಅನೇಕ ಆರೋಪಗಳಿವೆ. ಹೀಗಾಗಿ ಎಸ್ ಐ ಟಿ ರಚನೆ ಮಾಡಲಾಗಿದೆ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದರು.
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಹಿಂದಿನ ಐದು ವರ್ಷದಲ್ಲಿ ರಸ್ತೆಗಳು ಆಗಿಲ್ಲ. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಅನೇಕ ಕಡೆ ರಸ್ತೆ ಹಾಳಾಗಿವೆ. ರಾಜ್ಯಪಾಲರು ಅರ್ಕಾವತಿ ಪತ್ರ ಬರೆದಿದ್ದರೆ ಅದನ್ನು ನೋಡುತ್ತೇವೆ. ಅವರ ಕಚೇರಿಯಿಮಂದಲೇ ಸೋರಿಕೆಯಾಗಿದೆ. ಅದರ ಬಗ್ಗೆ ತನಿಖೆಯಾಗಲಿ ಎಂದರು.