ಬೆಂಗಳೂರು:- ನಾವು ಎಲ್ಲವನ್ನೂ ಸಹಿಸಿಕೊಂಡಿರುವುದು PM ಮೋದಿಗೋಸ್ಕರ ಎಂದು HD ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಕಂಗಟ್ಟು ವಿಚಾರವಾಗಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವತ್ತು ದೇಶದಲ್ಲೇ ಅತಿಹೆಚ್ಚು ಗೌರವಿಸುವ ವ್ಯಕ್ತಿಯೆಂದರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಅವರು ಇಟ್ಟುಕೊಂಡಿರುವ ಗೌರವಕ್ಕೆ ಚ್ಯುತಿ ಬರಬಾರದೆಂಬ ಕಾರಣಕ್ಕೆ ನಾವು ಇಷ್ಟು ಬೊಗ್ಗಿದ್ದೇವೆ, ಇದಕ್ಕೂ ಮೀರಿ ಬೊಗ್ಗುವುದು ನಮ್ಮಿಂದ ಸಾಧ್ಯವಿಲ್ಲ ಎಂದರು.
ಇನ್ನೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಆಡಿದ ಮಾತಿನ ವಿಶ್ಲೇಷಣೆಯಾಗುತ್ತಿದೆ. ಅಂದರೆ ರಾಜ್ಯ ಬಿಜೆಪಿ ನಾಯಕರ ವರ್ತನೆಯಿಂದ ಅವರು ಬೇಸತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.