ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಂತೆ ಶೇ.70 ರಷ್ಟು ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದು ನಮ್ಮ ಅಂಕಿಅಂಶ ಹೇಳುತ್ತದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸೇರಿ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಗ್ಯಾರಂಟಿಗಳು ನೂರಕ್ಕೆ ನೂರು ಕೆಲಸ ಮಾಡುತ್ತಿವೆ. ಪ್ರತೀ ತಿಂಗಳು ಪ್ರತಿ ಮಹಿಳೆ ಖಾತೆಗೆ 5 ಸಾವಿರಕ್ಕೂ ಹೆಚ್ಚು ಹಣ ಜಮವಾಗುತ್ತಿದೆ. ಜಿಲ್ಲೆಯಲ್ಲಿ 98 % ರಷ್ಟು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಕಾರಜೋಳ ಬಿಜೆಪಿ ಪಕ್ಷದ ಅಭ್ಯರ್ಥಿ ಯಾರೇ ಅಭ್ಯರ್ಥಿ ಆದರೂ ನಮಗೆ ಹೆದರಿಕೆ ಇಲ್ಲ. ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ರಾಷ್ಟ್ರ ಅಚ್ಚರಿಯಾಗುವ ರೀತಿಯಲ್ಲಿ ಭಾಗ್ಯಗಳನ್ನು ಜಾರಿ ಮಾಡಿದ್ದೇವೆ. ದೇಶಕ್ಕೆ ಮಾದರಿಯಾಗುವಂತ ಕಾರ್ಯಕ್ರಮಗಳಿಲ್ಲ. ನುಡಿದಂತೆ ನಾವು ನಡೆದಿದ್ದೇವೆ. ಮೋದಿ 15 ಲಕ್ಷ ಹಣ ಕೊಡ್ತಿವಿ, 2 ಕೋಟಿ ಉದ್ಯೋಗ ಕೊಡ್ತಿವಿ ಆಂದ್ರು ಕೊಟ್ಟರಾ ಎಂದು ಪ್ರಶ್ನಿಸಿದರು.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ರಾಜ್ಯಕ್ಕೆ ಸತತವಾಗಿ ಅನ್ಯಾಯ ವಾಗುತ್ತಿದೆ. 4.5 ಲಕ್ಷ ಕೋಟಿ ತೆರಿಗೆಯನ್ನು ರಾಜ್ಯಕ್ಕೆ ನಾವು ಕಟ್ಟುತ್ತಿದ್ದೇವೆ. ನಮಗೆ ಕೊಡುತ್ತಿರುವುದು 50 ಸಾವಿರ ಕೋಟಿ ಮಾತ್ರ, ಇಷ್ಟೊಂದು ಅನ್ಯಾಯವಾಗುತ್ತಿದೆ. ಉತ್ತರ ಭಾರತದ ಗುಜರಾತ್ ಮಧ್ಯ ಪ್ರದೇಶಗಳಿಗೆ 96 ರೂಪಾಯಿಯಷ್ಟು ತೆರಿಗೆ ಹಣ ಕೊಡುತ್ತಿದ್ದಾರೆ. ಇದು ಅನ್ಯಾಯವಲ್ಲವೇ? 25 ಜನ ಎಂಪಿಗಳು ಗೆದ್ದಿದ್ದರಲ್ಲ ಅವರ್ಯಾರು ಇದರ ಬಗ್ಗೆ ಪಾರ್ಲಿಮೆಂಟ್ ನಲ್ಲಿಮಾತಾಡಿದ್ದಾರಾ?
ಅಪ್ಪರ್ ಭದ್ರಾಕ್ಕೆ 5300 ಕೋಟಿ ಹೇಳಿ ಐದು ರೂಪಾಯಿ ಕೊಟ್ಟಿಲ್ಲ. ಬಿಜೆಪಿಯವರು 10 ಸಾವಿರ ಒಂದು ಓಟಿಗೆ ಕೊಟ್ಟರು ಜನ ನಮ್ಮ ಪರವಾಗಿದ್ದಾರೆ. ಎಕ್ಟ್ರೋ ಬಾಂಡ್ ಹಣ ಬಂದರೂ ಚಿಂತೆ ಇಲ್ಲ, ನಾವು ಚೈನಾ ಗೋಡೆ ತರ ಕಾಂಗ್ರಸ್ ಭದ್ರವಾಗಿದ್ದು, ಮತದಾರರು ಪಕ್ಷದ ಪರವಾಗಿ ಮತಹಾಕಲು ಸಿದ್ದರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ನೂರಕ್ಕೆ ನೂರು ಡಿಕೆ ಸುರೇಶ್ ಗೆಲ್ಲುತ್ತಾರೆ ಎಂದರು. ಈ ಸಮಯದಲ್ಲಿ, ಅಭ್ಯರ್ಥಿ ಚಂದ್ರಪ್ಪ, ಶಾಸಕರಾದ ಎನ್ ವೈ ಗೋಪಾಲಕೃಷ್ಣ, ಬಿಜಿ ಗೋವಿಂದಪ್ಪ, ರಘುಮೂರ್ತಿ, ಕೆ ಸಿ ವೀರೇಂದ್ರಪಪ್ಪಿ, ಮಾಜಿ ಸಚಿವರಾದ ಹೆಚ್. ಆಂಜನೇಯ ಇದ್ದರು.