ತುಮಕೂರು: ವಿಪಕ್ಷ ನಾಯಕ ಆರ್.ಅಶೋಕ್ ತುಮಕೂರು ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ್ದಾರೆ..ಶಿರಾದ ರೈತರ ಜಮೀನಿಗೆ ತೆರಳಿ ಮಳೆ ಇಲ್ಲದೇ ಒಣಗಿರೋ ಬೆಳೆಯನ್ನ ಪರಿಶೀಲಿಸಿ,ರೈತರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ..ಇದೇ ವೇಳೆ ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಅಶೋಕ್ ಕಿಡಿಕಾರಿದ್ದಾರೆ.. ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬರ ಅಧ್ಯಯನ ನಡೆಸಿದೆ..ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್, ಎಂಎಲ್ಸಿ ಚಿದಾನಂದ್ ಸೇರಿ ಸ್ಥಳೀಯರ ಮುಖಂಡರು ಬರ ವೀಕ್ಷಣೆ ನಡೆಸಿದ್ದಾರೆ..
ಶಿರಾ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ರೈತ ಪಾಂಡುರಂಗಪ್ಪ ಎನ್ನುವರ ಜಮೀನಿಗೆ ಭೇಟಿ ನೀಡಿದ ತಂಡ ರೈತ ಬೆಳೆದಿದ್ದ ಜೋಳ, ಹುರುಳಿ ಬೆಳೆಯನ್ನ ವೀಕ್ಷಿಸಿದ್ದಾರೆ..3 ಎಕರೆ 30 ಗುಂಟೆಯಲ್ಲಿ ಜೋಳ,ಹುರುಳಿ ಬೆಳೆದಿದ್ದ ರೈತ ಪಾಂಡುರಂಗಪ್ಪ ಆನೆ ಕಾಲು ಕಾಯಿಲೆಗೆ ತುತ್ತಾಗಿದ್ದಾರೆ..ಕಾಂಗ್ರೆಸ್ ನವರು ಯಾರು ಕೇಳಿಲ್ಲ,ಮೂರು ವರ್ಷದ ಹಿಂದೆ ಬೆಳೆ ವಿಮೆ ಮಾಡಿದ್ದೆ.ಹಣ ಬರಲಿಲ್ಲ, ಈಗ ಕಾಲು ಸರಿಯಿಲ್ಲ ಹಾಗಾಗಿ ಬೆಳೆ ವಿಮೆ ಕಟ್ಟಲಿಲ್ಲ.50 ಸಾವಿರ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದೆ ಎಂದು ರೈತನ ಪಾಂಡುರಂಗಪ್ಪ ವಿಪಕ್ಷ ನಾಯಕ ಆರ್.ಅಶೋಕ್. ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ..
![Demo](https://ainlivenews.com/wp-content/uploads/2023/12/spoorthi-1.jpg)
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ತಮ್ಮ ಮೊಬೈಲ್ ನಲ್ಲೇ ರೈತನ ಜಮೀನಿನ ಆರ್.ಟಿ.ಸಿ ಪರಿಶೀಲಿಸಿದ ಆರ್.ಅಶೋಕ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಬೆಳೆ ಸಮೀಕ್ಷೆ,ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆದುಕೊಂಡರು..ಬೆಳೆಯ ಕುರಿತಾಗಿ ವಿವರವಾಗಿ ಮಾಹಿತಿ ಸಂಗ್ರಹಿಸದ ಅಧಿಕಾರಿಗಳಿಗೆ ಆರ್.ಅಶೋಕ್ ಕ್ಲಾಸ್ ತೆಗೆದುಕೊಂಡರು..ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ರಾಜ್ಯ ಸರ್ಕಾರ ಈಗಾಗಲೇ ರೈತರ ಸಂಕಷ್ಟಕ್ಕೆ ಧ್ವನಿಯಾಗಬೇಕಿತ್ತು,ಅಧಿಕಾರಿಗಳು ಮಂತ್ರಿಗಳು ರೈತರ ಮನೆ ಬಾಗಿಲಿಗೆ ಹೋಗಬೇಕಿತ್ತು,
ಆದರೆ ಯಾರು ಕೂಡಾ ಈ ಕಡೆ ತಲೆಹಾಕಿಲ್ಲ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರ ಅಟ್ಟರ್ ಫ್ಲಾಪ್ ಆಗಿದೆ ಎಂದು ಕಿಡಿಕಾರಿದರು.. ಸರ್ಕಾರ ಖಾಲಿ ಡಬ್ಬಾ, ಸರ್ಕಾರದ ಖಜಾನೆ ಖಾಲಿಯಾಗಿದೆ, ನಾನು ಸರ್ಕಾರಕ್ಕೆ ಕೇಳ್ತಿನಿ..ಇಲ್ಲಿಯವರೆಗೆ ಒಂದಾದ್ರು ಗೋಶಾಲೆ ತೆರೆದಿದೀರಾ..? ಬರಗಾಲ ಬಂದು ಮೂರು ತಿಂಗಳಾಯ್ತು.. ಆದ್ರು ಒಂದು ಗೋಶಾಲೆ ತೆರೆದಿಲ್ಲ.. ಕನಿಷ್ಟ ಪಕ್ಷ ಬೇರೆ ರಾಜ್ಯದಿಂದ ಮೇವು ತಂದುಕೊಡುವ ಕೆಲಸ ಮಾಡಿದ್ದೀರಾ..? ಅದು ಇಲ್ಲ..ಇದು ನಾಲಾಯಕ್ ಸರ್ಕಾರ, ಈ ಸರ್ಕಾರಕ್ಕೆ ಚಳಿಬಿಡಿಸುವ ಕೆಲಸವನ್ನ ನಾವು ಮಾಡ್ತಿವಿ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು..
ರೈತರ ಜಮೀನುಗಳಲ್ಲಿ ಬೆಳೆದಿರೋ ಬೆಳೆಗಳ ಸಮೀಕ್ಷೆ ಕುರಿತಾಗಿ ಆ್ಯಪ್ ಗಳಲ್ಲಿ ಸಮರ್ಪಕ ಮಾಹಿತಿಗಳನ್ನ ಅಪ್ಡೇಡ್ ಮಾಡದ ಕೃಷಿ ಅಧಿಕಾರಿಗಳಿಗೂ ಆರ್.ಅಶೋಕ್ ಇದೇ ವೇಳೆ ಕ್ಲಾಸ್ ತೆಗೆದುಕೊಂಡರು..ಇಂದು ತುಮಕೂರು ಜಿಲ್ಲೆ ಬಳಿಕ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬರ ವೀಕ್ಷಣೆ ನಡೆಸಲಿರೋ ಆರ್.ಅಶೋಕ್ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನ ಎತ್ತಿಹಿಡಿಯೋಕೆ ಈ ಮೂಲಕ ಅಣಿಯಾಗುತ್ತಿದ್ದಾರೆ…
![](https://ainlivenews.com/wp-content/uploads/2024/01/Ad-Banner-copy-scaled.jpg)