ಯಲಹಂಕ:-ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಮಾತೃ ಅಂಗವಿಕಲರ ಶಿಕ್ಷಣ ಸಂಸ್ಥೆ ವತಿಯಿಂದ ಯಲಹಂಕದಲ್ಲಿ ವಾಕಥಾನ್ ನಡೆದಿದೆ.
ಅಂಗವಿಕಲರ ಹಕ್ಕುಗಳು, ರಕ್ಷಣೆ ಮತ್ತು ಅಂಗವಿಕಲರ ಜಾಗೃತಿಗಾಗಿ ವಾಕಥಾನ್ ನಡೆದಿದ್ದು, ಯಲಹಂಕದ ವಿವೇಕಾನಂದ ಪಾರ್ಕ್ ನಿಂದ ಮದರ್ ಡೈರಿ ಸರ್ಕಲ್ ವರೆಗೂ ವಾಕಥಾನ್ ನಡೆದಿದೆ.
ಯಲಹಂಕ ಸುತ್ತಮುತ್ತಲಿನ 7ಕ್ಕು ಹೆಚ್ಚು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಭಾಗಿಯಾಗಿದರು. ರೈತರ ಸೇವಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಶ್ರೀಮತಿ ವಾಣಿಶ್ರೀ ವಿಶ್ವನಾಥರಿಂದ ವಾಕಥಾನ್ ಗೆ ಚಾಲನೆ ನೀಡಲಾಗಿದ್ದು, ಮೆರವಣಿಗೆ ಮೂಲಕ ಅಂಗವಿಕಲ ಮಕ್ಕಳ ಶಿಕ್ಷಣ, ವಿದ್ಯಾಭ್ಯಾಸ, ಹಕ್ಕಗಳ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ. ಯಲಹಂಕ ಮದರ್ ಡೈರಿ ಸರ್ಕಲ್ ನಲ್ಲಿ ಮಾತೃಶಿಕ್ಷಣ ಸಂಸ್ಥೆಯ ಶಿಕ್ಷಕಿಯರಿಂದ ಬೀದಿನಾಟಕ ಪ್ರದರ್ಶನ ನಡೆದಿದೆ.