ಶಿವಮೊಗ್ಗ : ನನ್ನನ್ನು ಇನ್ನೂ ಯಾಕೆ ಬಿಜೆಪಿಯಿಂದ ಉಚ್ಛಾಟನೆ ಮಾಡಿಲ್ಲ ಎಂಬುದು ಗೊತ್ತಿಲ್ಲ. ನಾನು ಕೂಡ ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ. ಉಚ್ಛಾಟನೆ ಬಳಿಕ ಇವರ ವಿರುದ್ಧ ಮತ್ತಷ್ಟು ಭಾಷೆ ಬಳಸಬಹುದು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನ್ನನ್ನು ಉಚ್ಛಾಟನೆ ಮಾಡಿದರೆ ಅಪ್ಪ, ಮಕ್ಕಳ ವಿರುದ್ಧ ಮತ್ತಷ್ಟು ಭಾಷೆಗಳು ಬಳಸಲು ಅನುಕೂಲವಾಗುತ್ತದೆ. ಆದರೆ, ಯಾಕೆ ಇನ್ನು ಉಚ್ಛಾಟನೆ ಮಾಡಿಲ್ಲ ಎಂಬುದು ಗೊತ್ತಿಲ್ಲ. ನಾನು ವಾಪಸ್ ಬರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಶುದ್ಧೀಕರಣವಾಗಬೇಕೆಂದು ಬಯಸಿ ಹೊರಬಂದು ನಾನು ಹೋರಾಡುತ್ತಿದ್ದೇನೆ ಎಂದು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
Old Pension Scheme: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ
ನಾನು ಧೈರ್ಯ ಮಾಡಿ ಹೋರಾಡುತ್ತಿದ್ದೇನೆ, ಸಿಟಿ ರವಿ ಒಳಗಿದ್ದು ಹೋರಾಡುತ್ತಿದ್ದಾರೆ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನಾನು ಹೇಳಿಲ್ಲ. ಅವರಿಗೆ ಅವಕಾಶ ಕೊಟ್ಟಿಲ್ಲ ಎಂದು ನಾನು ಹೇಳಿದ್ದೆನೆ. ಸಿಟಿ ರವಿ, ಪ್ರತಾಪ್ ಸಿಂಹ ಹಾಗೂ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ಗೆ ಅವಕಾಶ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದೇನೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)