ದೊಡ್ಡಬಳ್ಳಾಪುರ: ಮಾಚಗೊಂಡನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿಜೂನ್ ನಾಥ್ ಜಗನ್ನಾಥ್ ಎನ್ (ಆಡಿಟರ್) ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ಎ ಅವರು ಅವಿರೋಧವಾಗಿ ಆಯ್ಕೆಯಾದರು.
ಮಾಚಗೊಂಡನಹಳ್ಳಿ ವಿ.ಎಸ್.ಎಸ್.ಎನ್ ಗೆ 02-03- 2025 ರಂದು ಚುನಾವಣೆ ನಡೆದಿತ್ತು.ಚುನಾವಣೆಯಲ್ಲಿ 12 ಸದಸ್ಯರು ಜಯಗಳಿಸಿದ್ದರು. ಮಾರ್ಚ್ 12ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ್ ಎನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಎ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ನಾಗಭೂಷಣ ಎಂ ರವರು ಅವಿರೋಧವಾಗಿ ಆಯ್ಕೆ ಮಾಡಿದರು.
ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಹೂವಿನ ಹಾರಗಳನ್ನು ಹಾಕುವುದರ ಮೂಲಕ ಸಿಹಿಹಂಚಿ ಸಂಭ್ರಮಿಸಿದರು. ಇದೇ ವೇಳೆ ನೂತನ ಅಧ್ಯಕ್ಷರಾದ ಜಗನ್ನಾಥ್ ಎನ್ ಮಾತನಾಡಿ ಇಂದು ಮುಂದಿನ 5 ವರ್ಷಗಳವರೆಗೆ ನಡೆದ ಮಾಚಗೊಂಡನಹಳ್ಳಿ ವಿ.ಎಸ್.ಎಸ್.ಎನ್ ಚುನಾವಣೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ನಾನು ಅಧ್ಯಕ್ಷನಾಗಿ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ಎ ಅವರನ್ನು ಎಲ್ಲಾ ಸದಸ್ಯರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರು.ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ವಿ.ಎಸ್.ಎಸ್.ಎನ್ ಶ್ರಮಿಸುವುದಾಗಿ ಹೇಳಿದರು.
ಇದೇ ವೇಳೆ ತೆಂಗುನಾರು ಮಂಡಳಿ ಅಧ್ಯಕ್ಷರಾದ ವೆಂಕಟೇಶ್ ಬಾಬು, ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಸುರೇಶ್, ಮಾಜಿ ಅಧ್ಯಕ್ಷರಾದ ಮಂಜುನಾಥ್,ಜೆ.ಡಿ.ಎಸ್ ಮುಖಂಡರಾದ ಬೀಡಿಕೆರೆ ಗೌರೀಶ್, ಮುಕ್ಕೇನಹಳ್ಳಿ ಕುಮಾರ, ಹಾಡೋನಹಳ್ಳಿ ಮುನೇಗೌಡ ಹಲವು ಮುಖಂಡರು ಹಾಜರಿದ್ದರು.