ಬಾಗಲಕೋಟೆ: ಮೇ,7 ರಂದು ನಡೆಯುವ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸಧ್ಯ ಮನೆಯಿಂದಲೆ ಮಾಡುವರಿಗೆ ಮತದಾನ ಜಿಲ್ಲಾಧಿಕಾರಿ ಕೆ.ಎಮ್.ಜಾನಕಿ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಗ್ರಾಮಕ್ಕೆ ಸೇರಿದ ಮತಗಟ್ಟೆ ಸಂಖ್ಯೆ 108 ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ಬಸವರಾಜ್ ಪರೀಟ್. ಅವರ ಮನೆಗೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಮನೆಯಿಂದಲೆ ಮತದಾನ ಮಾಡಿಸಿದರು.
ತೇರದಾಳ ಮತಕ್ಷೇತ್ರದಲ್ಲಿರುವ ಒಟ್ಟು 321 ವಿಕಲಚೇತರಿಗೆ ಮತ್ತು ವೃದ್ಧರಿಗೆ ನಡೆಯುವ ಈ ಮತದಾನ ಚುನಾವಣಾ ತಂಡದಿಂದ ನಿನ್ನೆ ಯಿಂದಲೇ ಆರಂಭಿಸಿ ಶೆ% 70 ರಷ್ಟು ಮತಚಲಾವಣೆ ಮಾಡಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಸಾಜಿದ್ಅಹ್ಮದ್ ಮುಲ್ಲಾ ಹೇಳಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ, ಗ್ರೇಡ್-೨ ತಹಶೀಲ್ದಾರ್ ಎಸ್. ಬಿ. ಕಾಂಬಳೆ, ಶಿರಸ್ತೆದಾರ ಎಸ್. ಎಲ್. ಕಾಗಿಯವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ