ನೆಲಮಂಗಲ:- ವಿಶ್ವನಾಥ್ ನಮ್ಮ ಸಹೋದರರಂತೆ, ಭಿನ್ನಾಭಿಪ್ರಾಯ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ನೆಲಮಂಗಲದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು ನಮ್ಮ ನಮ್ಮ ನಾಯಕರು. ಎಲ್ಲಾ ನಮ್ಮ ನಾಯಕರು ಒಟ್ಟಿಗೆ ಇದ್ದಾರೆ. ನಮ್ಮ ಎರಡು ಪಕ್ಷದ ನಾಯಕರು ಒಂದೇ ಕುಟುಂಬದ ಸದಸ್ಯರು.
ಎರಡು ಪಕ್ಷದ ಒಗ್ಗಟ್ಟು ಹೆಚ್ಚಿಗೆ ಆಗಿದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನ್ನ ಗೆಲವು ನೂರಕ್ಕೆ ನೂರು. ವಿಶ್ವನಾಥ್ ನಮ್ಮ ಸಹೋದರ ಸಮಾನರು. ಸಣ್ಣ ಪುಟ್ಟ ವಿಚಾರ ನಾವು ಬಗೆ ಹರಿಸಿಕೊಳ್ಳುತ್ತೇವೆ. ಯಾರಿಂದ ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಭಗವಂತ ಇದ್ದಾನೆ ಎಂದು ವಿಶ್ವಾನಾಥ್ ಹೇಳಿಕೆಗೆ ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.