ನವದೆಹಲಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ CSk ನಡುವೆ ಹೈವೋಲ್ಟೋಜ್ ಪಂದ್ಯ ನಡೆಯಲಿದೆ. ಪಂದ್ಯಕೆ ಮಳೆ ಭೀತಿ ಇದ್ದರೂ ಕೂಡ ಪಂದ್ಯಕ್ಕೆ ಯಾವುದೇ ಅಡಚಣೆ ಆಗದೇ ಇರಲಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಖಾಲಿ ಜಾಗದಲ್ಲಿ ಮೊದಲು ವಿರಾಟ್ರ ಚಿತ್ರ ಮೂಡುವಂತೆ ರೇಖೆಗಳನ್ನು ಗೀಚಿದ್ದಾನೆ. ಬಳಿಕ ರೇಖೆಗಳುದ್ದಕ್ಕೂ ಬೆಳ್ಳುಳ್ಳಿ, ಈರುಳ್ಳಿಯನ್ನು ಜೋಡಿಸಿದ್ದಾನೆ. ಇದು ಥೇಟ್ ವಿರಾಟ್ರಂತೆ ಕಾಣುವಂತೆ ಮಾಡಿದ್ದಾನೆ.
Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!
ಇದು ನೋಡುಗರನ್ನು ಬೆರಗಾಗುವಂತೆ ಮಾಡಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜೋಡಿಸಿದ ಬಳಿಕ ದೂರದಿಂದ ಅದನ್ನು ನೋಡಿದಾಗ ಕೊಹ್ಲಿಯ ಚಿತ್ರವೇ ಅಲ್ಲಿ ಕಾಣುತ್ತದೆ. ಇದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ.
https://x.com/ImTanujSingh/status/1790722605508616200
ಈ ಚಿತ್ರವನ್ನ ಬಿಡಿಸಿದ ಅಭಿಮಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ, ತನುಜ್ ಸಿಂಗ್ ಎಂಬ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಚಿತ್ರ ಬಿಡಿಸಿದ್ದಾನೆ. ವಿರಾಟ್ ಕೊಹ್ಲಿ ಎಂದರೆ ಭಾವನಾತ್ಮಕ ಸಂಬಂಧ ಎಂದು ಬರೆದುಕೊಂಡಿದ್ದಾನೆ.
![](https://ainlivenews.com/wp-content/uploads/2024/01/Ad-Banner-copy-scaled.jpg)