ವಿಜಯಪುರ: ವಕ್ಫ್ ಆಸ್ತಿ ವಿಚಾರವಾಗಿ ವಿಜಯಪುರದಲ್ಲಿ ವಾಕ್ಸಮರ ಮುಂದುವರೆದಿದೆ. ವಿಜಯಪುರದಲ್ಲಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಅಕ್ಟೋಬರ್ 15ರಂದು ನಡೆದಿದ್ದ ವಕ್ಫ್ ಕಾಯ್ದೆ ಹಠಾವೋ ದೇಶ ಬಚಾವೋ ಆಂದೋಲನದಲ್ಲಿ ಶಾಸಕ ಯತ್ನಾಳ್, ಸಿಟಿ ರವಿ ಹಾಗೂ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಮುಸ್ಲಿಂ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ ಕೌಂಟರ್ ಕೊಟ್ಟಿದ್ದಾರೆ. ವಿಜಯಪುರ ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಹಿಂದು ಸಮಾಜದ ನಾಯಕರು, ವಿವಿಧ ಸ್ಥಾಯಿ ಸಮಿತಿಗೆ ನೇಮಕವಾದ ವಿವಿಧ ಸಮಾಜದವರೊಂದಿಗೆ ಸೇರಿ ಮುಸ್ಲಿಂ ಮುಖಂಡರು ಶಾಸಕ ಯತ್ನಾಳ್ ಗೆ ತಿರುಗೇಟು ನೀಡಿದರು.
ವಿಜಯಪುರ ನಗರದಲ್ಲಿ ವಕ್ಫ್ ಕಾಯ್ದೆ ವಿರುದ್ಧ ನಡೆದ ಹೋರಾಟ ರಾಜಕೀಯ ಪ್ರೇರಿತ ಜನರಿಗೆ ದಾರಿ ತಪ್ಪಿಸುವ ಹೋರಾಟವಾಗಿದೆ. ಹತ್ತು ಸಾವಿರ ಎಕರೆ ಭೂಮಿ ಫ್ಲ್ಯಾಗಿಂಗ್ ಮಾಡಿ ಸರ್ವೆ ಮಾಡಲು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಇದನ್ನೇ ಒಂದು ನೆಪವಾಗಿ ಇಟ್ಟುಕೊಂಡು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ಸಾರ್ವಜನಿಕರಲ್ಲಿ ತಪ್ಪಾಗಿ ಬಿಂಬಿಸುತ್ತಿದ್ದಾರೆ.
ಯತ್ನಾಳ್ ಭಾಷೆ ನಡೆ-ನುಡಿ ನೋಡಿದರೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ್ ಮಾಡುತ್ತಿದ್ದಾರೆ ಎಂದು ಅಬ್ದುಲ್ ಹಮೀದ್ ಮುಶ್ರೀಫ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ವಕ್ಫ್ ಸಚಿವರು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿರುವ ಸರ್ವೆ ವಿಷಯದಲ್ಲಿ ಶೇಕಡ 98% ರಷ್ಟು ಮುಸ್ಲಿಂ ಸಮಾಜದ 2 ಗುಂಪುಗಳ ಅಥವಾ ಇಬ್ಬರು ಮುತುವಲ್ಲಿಗಳಲ್ಲಿ ತಂಟೆ ತಕರಾರುಗಳಿವೆ ಅವುಗಳನ್ನು ಕ್ಲಿಯರ್ ಮಾಡಬೇಕಾಗಿದೆ. ಈ ವಿಷಯವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ನಿರ್ದೇಶನ ನೀಡಿದ್ದಾರೆ. ಶಾಸಕ ಯತ್ನಾಳ್ ಇದರಲ್ಲಿ ಮುಸ್ಲಿಂ ಮಂತ್ರಿ ಎಂಬ ಒಂದೇ ಒಂದು ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ.
DRDO Recruitment: ಈ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ – ಕೈ ತುಂಬಾ ಸಂಬಳ
ಯಾವ ರೈತರ, ಬಡವರ, ಭೂಮಿಗಳು ಅನ್ಯಾಯದಿಂದ ತೆಗೆದುಕೊಳ್ಳಲಾಗುತ್ತಿಲ್ಲ. ಕೇವಲ ತಮ್ಮ ಪೂರ್ವಾಗ್ರಹ ಪೀಡಿತ ವಿಚಾರಗಳಿಂದ ಜನರಲ್ಲಿ ಗೊಂದಲಮಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ದಾಖಲೆಗಳಿಲ್ಲದೆ ಯಾರ ಭೂಮಿಯು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಹಾಗೇನಾದರೂ ಹಿಂದಿನಿಂದಲೂ ಉಳಿಮೆ ಮಾಡಿಕೊಂಡು ಬಂದಿರೋ ರೈತರು ಜಮೀನು ವಕ್ಫ್ ವಶಕ್ಕೆ ತೆಗೆದುಕೊಂಡ್ರೆ ನಾವೇ ವಕ್ಫ್ ವಿರುದ್ಧ ಹೋರಾಡುತ್ತೇವೆ. ಜೆಡಿಎಸ್ ನಲ್ಲಿದ್ದಾಗ ಶಾಸಕ ಯತ್ನಾಳ್ ಮುಸ್ಲಿಂ ಟೋಪಿ ಹಾಕಿಕೊಂಡು ದರ್ಗಾಕ್ಕೆ ಭೇಟಿ ನೀಡಿದ್ದಾರೆ. ರಾಜಕೀಯಕ್ಕಾಗಿ ಹಿಂದೂ ಹುಲಿ ಅಂತಾರೆ ಇವರು ಇಲಿ ಎಂದು ಅಬ್ದುಲ್ ಹಮೀದ್ ಮುಶ್ರೀಫ್ ವ್ಯಂಗ್ಯವಾಡಿದ್ರು..
ಇನ್ನು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹರಿಹಾಯ್ದ ಮುಸ್ಲಿಂ ಮುಖಂಡರು ಅವರೊಬ್ಬರು ಸುಳ್ಳಿನ ಸರದಾರ ಸುಳ್ಳು ಕಥೆ ಕಟ್ಟುವಲ್ಲಿ ನಿಸ್ಸೀಮರು. ವಿಜಯಪುರದಲ್ಲಿ ಅತಿ ಹೆಚ್ಚು ಸ್ಲಿಪ್ಪರ್ ಸೆಲ್ ಗಳಿವೆ ಅಂತ ವೇದಿಕೆಯಿಂದ ಬಹಿರಂಗವಾಗಿ ಹೇಳಿದ್ದಾರೆ. ಸೂಲಿಬೆಲೆ ಅವರನ್ನು ತಕ್ಷಣ ಅರೆಸ್ಟ್ ಮಾಡಿ ತನಿಖೆ ಮಾಡಬೇಕು ಇವರ ಸ್ಲಿಪ್ಪರ್ ಸೆಲ್ ಗಳು ಎಲ್ಲೆಲ್ಲಿದ್ದಾರೆ ಯಾರ್ಯಾರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಪೊಲೀಸ್ ಇಲಾಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸೂಲಿಬೆಲೆ ಬಂಧನಕ್ಕೆ ಆಗ್ರಹಿಸಿದರು. ಯತ್ನಾಳ್ ಅವರಿಗೆ ನೇರವಾಗಿ ಅಬ್ದುಲ್ ಹಮೀದ್ ಮುಶ್ರೀಫ್, ಹಾಗೂ ಅಬ್ದುಲ್ ರಜಾಕ್ ಹೊರ್ತಿ ಪ್ರಶ್ನಿಸಿದ್ರು, ಜಗಳಾಡುವದು ಇದ್ದರೆ ನೇರವಾಗಿ ನಮ್ಮೊಂದಿಗೆ ಬನ್ನಿ ನಾವು ನೀವೂ ಜಗಳಾಡೋಣ, ವಿನಃ ಕಾರಣ ರಾಜಕಾರಣಕ್ಕೆ ಜಾತಿ ಜಾತಿ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಬೇಡಿ ಎಂದರು.