ಉಡುಪಿ: ರಾಜಕಾರಣದ ಬಗ್ಗೆ ಏನೂ ಜ್ಞಾನವಿಲ್ಲದ ವಿಜಯೇಂದ್ರ ಒಬ್ಬ ಬಚ್ಚಾ, ಯಡಿಯೂರಪ್ಪನವರಿಗೆ ಯಾಕಿಷ್ಟು ಪುತ್ರ ವ್ಯಾಮೋಹ. ಆರು ತಿಂಗಳು ಅಧ್ಯಕ್ಷ ಹುದ್ದೆಯನ್ನು ಖಾಲಿ ಬಿಟ್ಟು, ಹೋಗಿ ಇಂತವರಿಗೆ ಕೊಟ್ಟಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನಲ್ಲಿ ಅಣ್ಣಾಮಲೈ ಹಾಕುತ್ತಿರುವ ಪ್ರಯತ್ನ ಎಲ್ಲರಿಗೂ ಮಾದರಿ ಎಂದು ಈಶ್ವರಪ್ಪ ಹೇಳಿದ್ದಾರೆ. ಮಾಡಿ ಮಗನನ್ನು ಅಧ್ಯಕ್ಷನನ್ನಾಗಿ ಮಾಡಿಕೊಂಡು ಬಂದರು. ಸಾವಿರಾರು ಜನ ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಅದು ಬಿಟ್ಟು, ರಾಜ್ಯದಲ್ಲಿ ಯಾರೂ ನಿಷ್ಟಾವಂತ ಕಾರ್ಯಕರ್ತರೋ, ಮುಖಂಡರೋ ಯಡಿಯೂರಪ್ಪನವರಿಗೆ ಸಿಗಲಿಲ್ಲವಾ” ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
” ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್, ಒಕ್ಕಲಿಗರನ್ನಾಗಿದ್ದರೆ ಸಿ.ಟಿ.ರವಿ, ಹಿಂದುಳಿದ ವರ್ಗದವರನ್ನು ಮಾಡಬೇಕು ಎಂದಿದ್ದಾರೆ ನನ್ನನ್ನು ಮಾಡಬಹುದಾಗಿತ್ತಲ್ಲವೇ ” ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇಷ್ಟು ಸೀಟ್ ಬರಲು ಯಡಿಯೂರಪ್ಪ ಕಾರಣ ಎನ್ನುವುದು ಬರೀ ಭ್ರಮೆ. ತಮಿಳುನಾಡಿನಲ್ಲಿ ಅಣ್ಣಾಮಲೈ ವರ್ಷಾನುಗಟ್ಟಲೆಯಿಂದ ಅಲ್ಲಿ ಒದ್ದಾಡುತ್ತಿದ್ದಾರೆ. ಯಾವತ್ತು ಅವರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ. ಎಲ್ಲವನ್ನೂ ಎದುರಿಸಿ ಹಿಂದುತ್ವದ ಬಗ್ಗೆ ಹಗಲಿರುಳು ಮಾತಾನಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)