ವಿಜಯನಗರ:- ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳನ್ನು ಹಾಸ್ಟೇಲ್ ಮೇಲ್ವಿಚಾರಕರಾದ ಶ್ವೇತಾ ಅವರು ಕಳ್ಳ ಮಾರ್ಗದಲ್ಲಿ ಬೇರೆಡೆ ಸಾಗಿಸುತ್ತಿರುವ ಆರೋಪ ಕೇಳಿ ಬಂದಿದೆ.
IPL 2024: IPL ನಲ್ಲಿ ಕಿಂಗ್ ಕೊಹ್ಲಿಯ ಈ ದಾಖಲೆ ಸರಿಗಟ್ಟುವುದು ಸುಲಭವಲ್ಲ!
ವಿಜಯನಗರ ಜಿಲ್ಲೆ ಕಮಲಾಪುರ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸವಿತಾ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಮಲಾಪುರದಲ್ಲಿ ಘಟನೆ ನಡೆದಿದೆ. 50 ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ಹಾಸ್ಟೇಲ್ ಬೇಸಿಗೆಯ ರಜೆಗೆ ಮಕ್ಕಳು ಮನೆಗಳಿಗೆ ಹೋಗುವುದನ್ನೇ ಕಾದು ಕುಳಿತ ನಿಲಯ ಪಾಲಕಿ ಶ್ವೇತಾ ಉಳಿದಿರುವ ದವಸ ಧಾನ್ಯಗಳನ್ನು ತಮ್ಮ ಸ್ವಂತ ಮನೆಗೆ ಬಳಿಸಿಕೊಂಡಿದ್ದಾರೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ದುರ್ಗೇಶ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ನಿಲಯ ಪಾಲಕಿ ಶ್ವೇತಾ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.