ಧಾರವಾಡ: ಇಂಡಿಯನ್ ಟಿಬೆಟಿಯನ್ ಬಾರ್ಡರ್ ಫೋರ್ಸ್ʼನಲ್ಲಿ ಅ್ಯಂಕರ್- ಇಡಿಯಮ್ ಟಿಬೆಟಿಯನ್ ಬಾರ್ಡರ್ ಪೋರ್ಸನಲ್ಲಿ 22ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದ, ಧಾರವಾಡ ತಾಲ್ಲೂಕಿನ ವೇಕಂಟಾಪುರ ಗ್ರಾಮದ ನಿವೃತ ಯೋಧನಿಗೆ ಗ್ರಾಮಸ್ಥರೆಲ್ಲರು ಸೇರಿ ಸನ್ಮಾನ ಮಾಡುವ ಮೂಲಕ ಯೋಧನಿಗೆ ಗೌರವಿಸಿದರು. ವೇಂಕಟಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಆವರಣದಲ್ಲಿ ನಿವೃತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. 22 ವರ್ಷ ಐಟಿಬಿಪಿ ಪೋರ್ಸನಲ್ಲಿ ಭಾರತೀಯ ಸೈನಿಕನಾಗಿ ಮೆಹಬೂಬ್ ಸುಬಾನಿ ಮಕ್ತುಮ ಸಾಬ್ ಸೈದನವರ ಅವರು ನಿವೃತಿ ಹೊಂದಿ ಕಳೆದೆರಡು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಆಗಮಿಸಿದರು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರು ಸೇರಿ ಮೆಹಬೂಬ್ ಸುಬಾನಿ ಮಕ್ತುಮ ಸಾಬ್ ಸೈದನವರ ಹಾಗೂ ಗ್ರಾಮದಲ್ಲಿ ಈ ಹಿಂದೆ ನಿವೃತಿ ಹೊಂದಿದ್ದ ಮೆಹಬೂಬ್ ಸುಬಾನಿ ಸೈದನವರ, ಫಕ್ಕಿರೇಶ ಹವಾಲ್ದರ್, ಕುತ್ಬುದೀನ್ ನಗಾರ್ತಿಯರಿಗೆ ಹೂವಿನ ಹಾರದ ಜೊತೆಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಜೊತೆಗೆ ಇದೇ ವೇಳೆ ಮಾತನಾಡಿದ ಗ್ರಾಮದ ಹಿರಿಯರು ನಾಲ್ಕು ಯೋಧರು ನಮ್ಮ ಗ್ರಾಮದ ಹೆಮ್ಮೆಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ನಮ್ಮ ಗ್ರಾಮಕ್ಕೆ ಬದು ಉಳಿದಂತಹ ಯುವ ಸಮುದಾಯಕ್ಕೆ ಮಾದರಿಯಾಗುವುದರ ಜೊತೆಗೆ ಸ್ಪೂರ್ತಿಯಾಗಿದ್ದಾರೆ. ಎಲ್ಲರಿಗೂ ಇಂತಹ ಅವಕಾಶಗಳು ಸಿಗುವುದಿಲ್ಲ, ನಮ್ಮ ಗ್ರಾಮದ ಯುವಕರು ಮತ್ತಷ್ಟು ನಮ್ಮ ದೇಶದ ಸೇನೆಗೆ ಸೇರಬೇಕುಬೆಂದು ಹೇಳಿದರು.