ಬಿಗ್ ಬಾಸ್ ಫಿನಾಲೆ ತನಕ ಟಫ್ ಪೈಟ್ ಕೊಟ್ಟು ಜನರ ಪ್ರೀತಿ ಗೆದ್ದ ವರ್ತೂರುಗೆ ಸಿಕ್ಕಾಪಟ್ಟೆ ಜನ ಬೆಂಬಲವಿದೆ. ಹಾಗಾಗಿಯೇ ರಾಜಕೀಯ ಬರುತ್ತಾರಾ ಎಂಬ ಪ್ರಶ್ನೆಗೆ ವರ್ತೂರು ನೋ ಎಂದಿದ್ದಾರೆ.
ನಾನು ರಾಜಕೀಯಕ್ಕೆ (Politics) ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಸದ್ಯ ಅವರ ಗಮನ ಇರೋದು ಹಳ್ಳಿಕಾರ್ ರೇಸ್ ಬಗ್ಗೆ ಇದು ಮಾರ್ಚ್ನಲ್ಲಿ ನಡೆಯಲಿದೆ. ಸುದೀಪ್, ಧ್ರುವ ಸರ್ಜಾ ಸೇರಿದಂತೆ ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ
ಈ ವೇಳೆ ಜಗ್ಗೇಶ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅದೆಲ್ಲಾ ಮುಗಿದು ಹೋದ ಕತೆ ಬಿಡಿ ಎಂದು ವರ್ತೂರು ಸಂತೋಷ್ ಮಾತನಾಡಿದ್ದಾರೆ. ವಿವಾದದ ಬಗ್ಗೆ ಏನೋ ಉತ್ತರಿಸಿದೇ ಇಲ್ಲಿಗೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)