ಬೆಂಗಳೂರು:- ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹೇಳಿದ್ದಾರೆ.
ರೋಗಿಗಳಿಗೆ ಗುಡ್ ನ್ಯೂಸ್… ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್ಗೆ ದರ ನಿಗದಿ ಮಾಡಿದ ಸರ್ಕಾರ!
ಈ ವೇಳೆ ಎಸ್ಐಟಿ ಆಗಲಿ ಸಿಬಿಐ ಆಗಲಿ ಈ ಪ್ರಕರಣದಲ್ಲಿ ನನಗೆ ನೋಟಿಸ್ ನೀಡಿಲ್ಲ. ಯಾವುದೇ ತನಿಖೆಗೂ ಕರೆದಿಲ್ಲ. ಮಾಜಿ ಸಚಿವ ನಾಗೇಂದ್ರ ಅವರ ಪಾತ್ರದ ಬಗ್ಗೆ ಆರೋಪಿಗಳ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೇ. ನನ್ನ ರಾಜೀನಾಮೆ ಕೇಳಿದ್ರೆ, ಇಡಿ ಪ್ರಕರಣದಲ್ಲಿ ಸಾಸಿವೆ ಕಾಳಿನಷ್ಟೂ ನನ್ನ ಪಾತ್ರ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಯಾರಾದರೂ ನನ್ನ ಹೆಸರು ಹೇಳಿ ದುರುಪಯೋಗಪಡಿಸಿಕೊಂಡಿದ್ದರೆ ತನಿಖೆಯಲ್ಲಿ ಅದು ಬಹಿರಂಗವಾಗಲಿದೆ. ನಾನು ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ರಾಜೀನಾಮೆ ಕೊಡಲು ನನಗೆ ಯಾರು ಹೇಳಿಲ್ಲ. ಸಿಎಂ ಹಾಗೂ ನಾಯಕರು ಹೇಳಿದರೆ ರಾಜೀನಾಮೆ ಕೊಡುತ್ತೇನೆ. ತನಿಖೆಯಿಂದ ಸತ್ಯ ಹೊರಬರಲಿ ಎಂದು ಅವರು ತಿಳಿಸಿದ್ದಾರೆ.