ವಿಧಾನಸಭೆ:- ದೇಗುಲಗಳ ಆದಾಯವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ದೇಗುಲಗಳ ಆದಾಯವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಇನ್ಯಾರೊಗೋ ಕೊಡುತ್ತೀರಿ ಎಂದು ಆರೋಪಿಸಿದರು.
ದೇವಸ್ಥಾನಗಳ ಆದಾಯವನ್ನು ದೇಗುಲಗಳ ಅಭಿವೃದ್ಧಿಗೆ ಬಳಸಬೇಕು. ದೇವಸ್ಥಾನಗಳ ಆದಾಯವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ದೇಗುಲಗಳ ಆದಾಯವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಅಂತಾ ದೆಹಲಿ ಚಲೋ ಮಾಡಿದ್ದರು. ಇಲ್ಲಿ ನಮ್ಮ ದೇವರು ನಮ್ಮ ಹಣ, ನಮ್ಮ ಹಕ್ಕು ಎಂದರು.
ದೇವಸ್ಥಾನಕ್ಕೆ ಅಂತಾ ನಾವು ಹಣ ಕೊಡುತ್ತೇವೆ. ನೀವು ವಕ್ಫ್ ಕಾಂಪೌಂಡ್ ಕಟ್ಟಲು, ಯಾಱರಿಗೆ ಬೇಕೋ ಕೊಡುತ್ತೀರಿ. ಇದು ಯಾರಪ್ಪನ ಆಸ್ತಿ? ದೇಗುಲಗಳ ಮೇಲೆ ಮಾತ್ರ ಕಾನೂನೇಕೆ? ಮಸೀದಿ, ಚರ್ಚ್ಗಳ ಮೇಲೆ ಏಕೆ ನಿಮ್ಮ ಕಾನೂನು ಅನ್ವಯ ಆಗಲ್ಲ? ದೇಗುಲಗಳಲ್ಲಿ ಮುಕ್ತ ಆಡಳಿತ ತಂದರಷ್ಟೇ ನಿಜವಾದ ಜಾತ್ಯತೀತತೆ ಆಗಲಿದೆ ಎಂದರು.
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರಿಸಿದ ಯತ್ನಾಳ್, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಸರ್ಕಾರ ಭಾಷಣ ಸಿದ್ಧ ಮಾಡುತ್ತದೆ, ಇದು ರಾಜ್ಯಪಾಲರ ಘನತೆಗೆ ಧಕ್ಕೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ಮಾಡಿದ್ದಾರೆ. ಪಾಠದಲ್ಲಿ ತಾಜಮಹಲ್, ಕೆಂಪುಕೋಟೆ ಕಟ್ಟಿದವರ ಬಗ್ಗೆ ಇರುತ್ತದೆ. ಆದರೆ ಕಾಶಿ, ಮಥುರಾ ಒಡೆದ ಬಗ್ಗೆ ಶಿಕ್ಷಣ ಇರಲ್ಲ ಎಂದರು.