ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಲಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣ ಬಳಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟೀಸ್ ನೀಡಲಾಗಿದೆ.
14730 ಕೋಟಿ ಹಣ ಎಸ್ಸಿಎಸ್ಪಿ ಟಿಎಸ್ಪಿಗೆ ಬಳಕೆ ಆರೋಪದ ಹಿನ್ಲೆನೆ ಸುಮೋಟೋ ಪ್ರಕರಣ ಕೈಗೆತ್ತುಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಇಲಾಖೆ ಯಾವ ಆಧಾರದ ಮೇಲೆ ಹಣವನ್ನ ಬಳಸಿದ್ದೀರಾ ಎಂದು ಸ್ಪಷ್ಟೀಕರಣ ಕೇಳಿ ನೋಟೀಸ್ ನೀಡಿದೆ.
ಬಜೆಟ್ ನಲ್ಲಿ ಶೇ 24.1% ಅನುದಾನ ಎಸ್ಸಿಎಸ್ಪಿ ಟಿಎಸ್ಪಿಗೆ ಬಳಕೆಗೆ ಮೀಸಲಿಡಲಾಗಿದೆ ಅದರಂತೆ ಈ ಭಾರಿ 39000 ಕೋಟಿ ರೂ ಎಸ್ಸಿಪಿ ಟಿಎಸ್ಪಿಗೆ ಮೀಸಲಿಟ್ಟಿದೆ