ಬಳ್ಳಾರಿ: ವೇದಿಕೆ ಬ್ಯಾನರ್ ನಲ್ಲಿ ಪೋಟೋ ಹಾಕದ ಹಿನ್ನೆಲೆ ಬಿಜೆಪಿ ಬೂತ್ ವಿಜಯ ಅಭಿಯಾನ ಸಭೆಯಲ್ಲಿ ಗಲಾಟೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಂಬಂಧಿ ಕೆ. ರಾಮಲಿಂಗಪ್ಪ ಗರಂ ಆಗಿದ್ದು, ವೇದಿಕೆಯ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುರುಬ ಮುಖಂಡನನ್ನ ಯಾಕೆ ಕಡೆಗಣಿಸುತ್ತೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆದರು. ಮತ್ತೆ ಸಮಾಧಾನ ಪಡಿಸಿ ಕೆ.ರಾಮಲಿಂಗಪ್ಪ ಅವರನ್ನ ವೇದಿಕೆಗೆ ಕರೆತಂದ ಮುಖಂಡರು, ಇನ್ನೂ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು,ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವೈಎಂ ಸತೀಶ್ ಉಪಸ್ಥಿತಿಯಿದ್ದರು.