ಬಳ್ಳಾರಿ: “ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರ ಪರಿಹಾರ ಕೊಡವ ಬದಲು ಖಾಲಿ ಚೊಂಬು ಕೊಟ್ಟಿದ್ದಾರೆ. ಅದಾನಿ ಸೇರಿ ಕೆಲವೇ ಕೆಲ ಆಯ್ದ ಜನತೆಗೆ ದೇಶದ ಸಂಪತ್ತು ನೀಡುತ್ತಿದ್ದಾರೆ” ಎಂದು ದೂರಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಬಿಜೆಪಿ ಸಿರಿವಂತರಿಗೆ ಹಣ ಕೊಟ್ಟರೆ, ನಾವು ಬಡವರಿಗೆ ಹಣ ಕೊಟ್ಟು, ಲಕ್ಷಾಧೀಶ್ವರರನ್ನಾಗಿ ಮಾಡ್ತೇವೆ ” ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ” ನರೇಂದ್ರ ಮೋದಿ ಅವರದು ಭಾರತೀಯ ಚಂಬು ಪಾರ್ಟಿಯಾಗಿದೆ. ದೇಶ, ರಾಜ್ಯಕ್ಕೆ ಖಾಲಿ ಖಾಲಿ ಚಂಬು ಕೊಟ್ಟಿದ್ದಾರೆ. ಬರ ಪರಿಹಾರಕ್ಕಾಗಿ 18 ಸಾವಿರ ಕೋಟಿ ರೂ. ಕೊಡುವ ಬದಲು ಕೊಟ್ಟಿದ್ದು ಖಾಲಿ ಚಂಬು ನೀಡಿದ್ದಾರೆ ” ಎಂದು ಕಿಡಿಕಾರಿದರು.
Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ.! 10th ಪಾಸಾಗಿದ್ರೆ ಸಾಕು – ಇಂದೇ ಅರ್ಜಿ ಸಲ್ಲಿಸಿ
ಈ ಲೋಕಸಭಾ ಚುನಾವಣೆ ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದಾರೆ ಎಂದು ರಾಹುಲ್ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. “ದೇಶದ ಜನತೆಗೆ ಸಂವಿಧಾನ ರಕ್ಷಣೆಯಾಗಿದೆ. ಸಂವಿಧಾನ ಬರುವ ಮುಂಚೆ ದಲಿತ, ದುರ್ಬಲರಿಗೆ ಯಾವುದೇ ಅಧಿಕಾರ ಇದ್ದಿಲ್ಲ.
ರಾಜ – ಮಹಾರಾಜರು ತಮಗೆ ಬೇಕಾದ ಅಧಿಕಾರ ಮಾಡುತ್ತಿದ್ದರು. ಆ ದಿನ ಜನಸಮಾನ್ಯರೊಂದಿಗೆ ಸೇರಿ ಕಾಂಗ್ರೆಸ್ ಹೋರಾಟ ನಡೆಸಿ ಸ್ವಾತಂತ್ರ್ಯ, ಸಂವಿಧಾನ ತಂದಿದೆ. ಆದರೆ, ಈಗ ಬಿಜೆಪಿಯವರು ಸಂವಿಧಾನ ತೆಗೆದುಹಾಕಲು ಆಲೋಚಿಸುತ್ತಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿ ಇನ್ನೂ ಹುಟ್ಟಿಲ್ಲ. ಹೀಗಾಗಿ, ಕಾಂಗ್ರೆಸ್, ಇಂಡಿಯಾ ಒಕ್ಕೂಟ ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ” ಎಂದರು.