ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು 60 ಸಾವಿರ ಗಣಪತಿಗಳು ಎಂಬ ವ್ಯಂಗ್ಯವಾಗಿ ಮಾತನಾಡಿದರು ಅಲ್ಲಾ ಆ ಬಗ್ಗೆ ಸ್ವಲ್ಪ ವಿಚಾರ ಮಾಡಿ ಮಾತನಾಡಬೇಕು ಎಂದು ದಾವಣಗೆರೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದುಗಳ ಕೊಲೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ಅವರ ಮಾತಿನ ದಾಟಿಯಲ್ಲಿಯೇ ಪ್ರತಿಕ್ರಿಯೆ ಕೊಟ್ಟರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಈ ಬಗ್ಗೆ ಸಿದ್ಧರಾಮಯ್ಯಾನರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು ಇದು ಸರಿಯಲ್ಲ. ಇನ್ನು ನಾಗಮಂಗಲ ಗಲಾಟೆಯಲ್ಲಿ ಪಿಎಫ್ ಐ ಸಂಘಟನೆಗಳು ಪೂರ್ವ ತಯಾರಿ ಮಾಡಿ ಕಲ್ಲು ದೊಂಬಿ ತಯಾರು ಮಾಡಿಕೊಂಡು ಗಲಾಟೆ ಮಾಡಿದರು.ಹಿಂದುಗಳ ಅಂಗಡಿಗಳಮೇಲೆ ಪೆಟ್ರೋಲ್ ಬಾಂಬ್ ಎಸೆಯುತಿದ್ದು ಇದು ಒಂದೇ ದಿನಕ್ಕೆ ರೆಡಿ ಮಾಡಲು ಆಗತ್ತಾ . ಇದೊಂದು ಅತ್ಯಂತ ತುಷ್ಟೀಕಕರ ರಾಜಕಾರಣ ಎಂದರು.
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಹಾಗೂ ಕುಮಾರಸ್ವಾಮಿ ಅವರಿಗೆಲೋಕಾಯುಕ್ತ ವಿಚಾರವಾಗಿ
ನೋಟಿಸ್ ಕೊಟ್ಟ ಕುರಿತು ಸಹ ಮಾತನಾಡಿದರು. ಇದು ಯಾವ ನ್ಯಾಯ ಕುಮಾರಸ್ವಾಮಿ ಯಡಿಯೂರಪ್ಪ ನವರು ಯಾವಾಗ ಯಾವಾಗ ಸಿಎಂ ಇದ್ದರು ಅವರು ಏನು ಮಾಡಿದರು.ಆದರೆ ಈಗ ಏಕಾಏಕಿ ಯಾಕೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದ ಅವರು ಹಿರಿಯರಾದ ಯಡಿಯೂರಪ್ಪನರಿಗೆ ಈ ರೀತಿಯಲ್ಲಿ ನೋಟಿಸ್ ಜಾರಿ ಮಾಡುವುದು ಸರಿಯಲ್ಲ ಎಂದರು. ರಾಜಕೀಯ ಧ್ವೇಷದಿಂದ ಬಂದು ಈ ರೀತಿಯ ಕ್ರಮ ಕೈಗೊಳ್ಳವುದು ಬೇಡಾ ಎಂದರು