ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮಗೆ, ಭಾರತೀಯ ಜನತಾ ಪಕ್ಷದ ಪರವಾಗಿ ಧಾರವಾಡ ಲೋಕಸಭಾ ಅಭ್ಯರ್ಥಿಯಾಗಿ ಘೋಷಣೆಯಾದ ಕೂಡಲೇ ನಗರದ ದಾಜೀಬಾನಪೇಟೆಯಲ್ಲಿನ ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ ಬಂದು ಶ್ರೀದೇವಿಯ ದರ್ಶನ – ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿ ಪರವಾಗಿ ಸತ್ಕಾರ ಸಹ ಮಾಡಲಾಯಿತು.
ಕೇಂದ್ರದ ಪ್ರಭಾವಿ ಸಚಿವರು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ಪ್ರಹ್ಲಾದ ಜೋಶಿ ಅವರು, ತಮಗೆ 5ನೇ ಬಾರಿ ದೊರೆತ,ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಸ್ಥಾನಕ್ಕಾಗಿ ಸಂತಸಗೊಂಡರು.
ನಗರದ ದಾಜಿಬಾನ ಪೇಟೆಯಲ್ಲಿರುವ, ಕ್ಷತ್ರಿಯ ಸಮಾಜ ಬಾಂಧವರ ಕೇಂದ್ರ ಸ್ಥಾನವಾಗಿರುವ ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ, ಬಂದು ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದು ನಂತರ ಪ್ರೀತಿಯ ಸನ್ಮಾನ ಸ್ವೀಕರಿಸಿ ಸಂತಸಗೊಂಡರು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಈ ಸಂದರ್ಭದಲ್ಲಿ, ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿ ಹುಬ್ಬಳ್ಳಿ ಧಾರವಾಡ ಈ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರಹ್ಲಾದ ಜೋಶಿಯವರನ್ನು ಅತ್ಯಂತ ಆದರಪೂರಕವಾಗಿ ಸ್ವಾಗತಿಸಿ, ಶಾಲು ಮಾಲೆ ಹಾಗೂ ಹಣ್ಣು ಹಂಪಲದೊಂದಿಗೆ ಸತ್ಕರಿಸಿ ಶುಭ ಕೋರಲಾಯಿತು. ಪ್ರಹ್ಲಾದ ಜೋಶಿ ಅವರು ಮಾತನಾಡಿ ಅತ್ಯಂತ ಹಿಂದಿನ ಕಾಲದಿಂದಲೂ ಲೋಕಸಭಾ ಸದಸ್ಯರುಗಳಿಗೆ, ಶಾಸಕರುಗಳಿಗೆ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾ ಬಂದಿರುವ ಎಸ್. ಎಸ್. ಕೆ. ಸಮಾಜವನ್ನು ಎಂದು ಮರೆಯಲಾಗದು,ಈ ಬಾರಿಯೂ ಸಮಾಜದ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು ಕೋರಿದರು.
ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿಯ ಅಧ್ಯಕ್ಷರಾದ ಸತೀಶ ಜಿ. ಮೇಹರವಾಡೆ,ಉಪ ಮುಖ್ಯ ಧರ್ಮದರ್ಶಿಗಳಾದ ಕೆ.ಪಿ. ಪೂಜಾರಿ ಹಾಗೂ ಭಾಸ್ಕರ ಎನ್. ಜಿತೂರಿ, ಗೌರವ ಕಾರ್ಯದರ್ಶಿಗಳಾದ ಎನ್.ಎನ್.ಖೋಡೆ,ಗೌರವ ಸಹ ಕಾರ್ಯದರ್ಶಿಗಳಾದ ಟಿ.ವಿ.ಪೂಜಾರಿ ಹಾಗೂ ಎಸ್. ಎಸ್.ಕೆ.ಸಮಾಜದ ರಾಜ್ಯಾಧ್ಯಕ್ಷರಾದ ಅಶೋಕ ಕಾಟವೆ ಮತ್ತು ಸಮಾಜದ ಮಾಜಿ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ,
ಕೇಂದ್ರ ಪಂಚ ಸಮಿತಿಯ ಟ್ರಸ್ಟಿಗಳಾದ ರಂಗಾ ಬದ್ದಿ , ವಿಠ್ಠಲ ಲದ್ವಾ, ಎಲ್ಲಪ್ಪ ಬದ್ದಿ, ರಾಜು ಧರ್ಮದಾಸ, ಗಣಪತಸಾ ಹಬೀಬ್, ಶಂಕರಸಾ ಹಬಿಬ, ಎಮ್. ಆರ್. ಸೊಳಂಕಿ ಸೇರಿದಂತೆ ಸಮಾಜದ ಪ್ರಮುಖರುಗಳಾದ ಲಕ್ಷ್ಮಣ ದಲಬಂಜನ, ಗೋಪಾಲ ಬದ್ದಿ,ರಾಜು ಜರತಾರಘರ, ಮಿಥುನ ಚೌಹಾಣ, ದೀಪಕ ಜಿತೂರಿ, ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ, ಆನಂದ ಬುದ್ಧಿ ಸೇರಿದಂತೆ ಯುವಕ ಮಂಡಳದ ಹಾಗೂ ಮಹಿಳಾ ಮಂಡಳದ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.