ಬೆಂಗಳೂರು: ಮಾನ್ಯ ಸಾರಿಗೆ ಸಚಿವರೇ ಇತ್ತ ಒಮ್ಮೆ ಗಮನಿಸಿ.. ರಾಜ್ಯ ಸಾರಿಗೆ ಬಸ್ ಗಳಲ್ಲಿ ಇದೆಂತಾ ಅವ್ಯವಸ್ಥೆಯಾಗಿದೆ ಎಂದ್ರೆ ಶಕ್ತಿ ಯೋಜನೆ ಬಂದು ಬರ್ಬಾದ್ ಆಯ್ತಾ ರಾಜ್ಯ ಸರ್ಕಾರ ಎಂಬ ಅನುಮಾನ ಕಾಡತೊಡಗಿದೆ. ಒಂದು ಕಡೆ ಡಕೋಟ ಬಸ್ ಸರ್ವೀಸ್ ಮತ್ತೊಂದು ಕಡೆ ಮಳೆಗೆ ಛಾವಣಿ ಸೋರುವ ಬಸ್ ಆಗಿ ಮಾರ್ಪಟ್ಟಿದೆ. ಛೆ… ಇದೆಂತ ಅವ್ಯವಸ್ಥೆ ಎಂದು ರಾಜ್ಯದ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಹೌದು ಒಂದು ಕೈನಲ್ಲಿ ಕೊಡೆ, ಮತ್ತೊಂದು ಕಡೆಯಲ್ಲಿ ಡ್ರೈವರ್ ಕೊಡೆ ಇಟ್ಕೊಂಡು ಅಪಾಯಕಾರಿ ಡ್ರೈವಿಂಗ್ ಮಾಡುತ್ತಿರುವುದನ್ನು ನೀವು ನೋಡಬಹುದು.
ಮಳೆ ಬಂದಾಗ ಬಸ್ ನ ಮೇಲಿಂದ ಮಳೆನೀರು ಸೋರುತ್ತಿದ್ದು, ಇದರಿಂದ ಡ್ರೈವರ್ ಅನಿವಾರ್ಯವಾಗಿ ಕೊಡೆ ಹಿಡಿದು ಡ್ರೈವಿಂಗ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ವಾಯುವ್ಯ ಸಾರಿಗೆ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಇಲಾಖೆ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡ್ತಿದ್ಯಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.