ತುಮಕೂರು: ಬಾಯ್ಲರ್ ಸ್ಫೋಟದಿಂದ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಶ್ರೀಕಂಠೇಶ್ವರ ಮಿಲ್ಕ್ -ಪುಣ್ಯಕೋಟಿ ಮಜ್ಜಿಗೆ ಕಾರ್ಖಾನೆಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಮಲ್ಲೇಶಪುರದ ನಿವಾಸಿ ಯತೀಶ್ ಎಂಬುವನಿಗೆ ಸುಟ್ಟಗಾಯಗಳಾಗಿದ್ದು, ಬಾಯ್ಲರ್ ಸ್ಫೋಟದ ರಭಸಕ್ಕೆ ಗಂಭೀರ ಗಾಯಗೊಂಡಿದ್ದಾರೆ.
ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್..!
ಇನ್ನೂ ವಿಡಿಯೋ ಚಿತ್ರಿಕರಣ ಮಾಡಲು ಹೋದವರ ಮೇಲೆ ಅವಾಜ್ ಹಾಕಿ ಪೋನ್ ಕಸಿದುಕೊಳ್ಳಲು ಮಾಲೀಕ ಯತ್ನಿಸಿದ್ದಾರೆ. ಗಾಯಗೊಂಡ ಯುವಕನಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.