ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಅಫಿಡವಿಟ್ ಸಮರ್ಪಕವಾಗಿಲ್ಲ, ಅವರ ನಾಮ ಪತ್ರವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ವಕೀಲರು ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.
ಘೋಷಣೆ ಪತ್ರ ನ್ಯೂನತೆ ಹೊಂದಿದ್ದು, ನೋಟರಿ ಮುಂದೆ ಸಹಿ ಮಾಡಿರುವುದಿಲ್ಲಕಾನೂನಾತ್ಮಕವಾಗಿಯೂ ಇಲ್ಲ. ತಂದೆ ಓಬಣ್ಣ ಮತ್ತು ತುಕಾರಾಂ ಅಲಂಬಿತರು ಎಂದು ನಮೂದು ಮಾಡಿ ಅವರ ಸಾಲ, ಚರಾಸ್ತಿ ಮಾಹಿತಿ ನೀಡಿರುವದಿಲ್ಲ ಎಂದು ಉಲ್ಲೇಖಿಸಲಾಗಿದೆ.
ಎಲೆಕೋಸನ್ನ ವಾರಕ್ಕೊಮ್ಮೆ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಘೋಷಣೆ ಪತ್ರ ಕಾನೂನಾತ್ಮಕ ಇಲ್ಲವಾಗಿರುವುದರಿಂದ ತಿರಸ್ಕರಿಸಬಹುದಾಗಿದೆ. ಐಟಿ ರಿಟರ್ನ್ ವಿವರ ನೀಡಿಲ್ಲ, ಐಟಿ ಘೋಷಣೆ ಕಾಲಂ ಖಾಲಿ ಇದೆ. ಇದಕ್ಕೆ ಸಮಪರ್ಕ ಉತ್ತರ ನೀಡಿರುವದಿಲ್ಲ ಎಂದು ಚುನಾವಣ ಅಧಿಕಾರಿಗೆ ಶ್ರೀರಾಮುಲು ಪರ ವಕೀಲರು ಪ್ರಶ್ನಿಸಿದ್ದಾರೆ.