ಬಾಗಲಕೋಟ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ರೈತ ಸಂಘದ ಹೋರಾಟಗಾರ್ತಿ ಜಯಶ್ರೀ ಗುರಣ್ಣನವರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
Aadhar Card update: ಇನ್ನೂ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?.. ಈ ಸುದ್ದಿ ಮಿಸ್ ಮಾಡ್ದೆ ಓದಿ..!
ಬೆಳಗಾವಿ ಜಿಲ್ಲೆಯವರಾದ ಇವರು ಅಕಾಲಿಕ ಮರಣ ಹೊಂದಿದ್ದು ರೈತ ಸಂಘದ ಗಟ್ಟಿ ಧ್ವನಿಯಾಗಿದ್ದ ಮಹಿಳಾ ಹೋರಾಟಗಾರ್ತಿ ರೈತರ ನೇಕಾರರ ಕಾರ್ಮಿಕರ ಅನೇಕ ಹೊರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ ಅಧಿಕಾರಿಗಳನ್ನು ಮತ್ತು ಸರಕಾರಗಳನ್ನು ಎಚ್ಚರಿಸಿ ಜನಸಾಮಾನ್ಯರಿಗೆ ನ್ಯಾಯದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ದಿಟ್ಟ ಹೋರಾಟಗಾರ್ತಿಯನ್ನು ಕಳೆದುಕೊಂಡಿದ್ದು ಸಂಘಟನಾ ಶಕ್ತಿಯನ್ನು ಕುಂದಿದಂತಾಗಿದೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಅಳಲು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಸಂಗಪ್ಪ ಹಳ್ಳೂರ. ರಾಜೇಂದ್ರ ಮಿರ್ಜಿ,ಬಂದೇನಮಾಜ್ ಪಕಾಲಿ,ಸಂಗಮ್ ಲಕ್ಷ್ಮಣ ಬ್ಯಾಳಿ ರಾಜು ಕುಕ್ಕುಗೋಳ,ಮಲ್ಲು ಕಾಗಿ,ಸಂಗಮೇಶ ಗಿರಮಲ್ಲ ಕೈಸೋಲಗಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ