ಗದಗ: 27 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಕಾಸ ಸೌಹಾರ್ಧ ಕೋ-ಆಪರೇಟಿವ್ ಬ್ಯಾಂಕ್ ಲಿ. ತನ್ನ 16 ನೇ ಶಾಖೆಯ ಮೂಲಕ ಗದಗ ನಗರಕ್ಕೆ ಪಾದಾರ್ಪಣೆ ಮಾಡ್ತಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಹಿರೇಮಠ ಅವರು ನಾಳೆ ಜೂನ 13 ರಂದು ನಗರದ ಫೀಲ್ಡ್ ಮಾರ್ಶಲ್ ಕೆ ಎಂ ಕಾರ್ಯಪ್ಪ ವೃತ್ತದ ಬಳಿ ಇರುವ ವಿಶಾಲ್ ಆರ್ಕೇಡ್ ನಲ್ಲಿ ಬ್ಯಾಂಕ್ ಆರಂಭ ಮಾಡಲಾಗ್ತಿದೆ,
ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಕಲ್ಲಯ್ಯಜ್ಜಮವರು ವಹಿಸಲಿದ್ದಾರೆ. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅದ್ಯಕ್ಷರಾದ ಈಶ್ವರಪ್ಪ ಮುನವಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸ್ತಿದ್ದಾರೆ, ವಿಕಾಸ ಸೌಹಾರ್ಧ ಕೋ- ಆಪರೇಟಿವ್ ಬ್ಯಾಂಕ್ ವರ್ಷದ 365 ದಿನವೂ ಕೂಡಾ ರಜೆ ಸಹಿತವಾಗಿ ಬೆಳಿಗ್ಗೆ 8 ರಿಂದ ರಾತ್ರಿ 8 ಘಂಟೆಯವರೆಗೆ ಗ್ರಾಹಕರಿಗೆ ನಿರಂತರ ಸೇವೆ ಸೌಲಭ್ಯ ಒದಗಿಸಲಿದೆ. ರಜೆ ರಹಿತ ಬ್ಯಾಂಕ್ ದೇಶದಲ್ಲೇ ಮೊದಲು ಎನ್ನಲಾಗಿದೆ.
ಗದಗ ನಗರದ ಆರ್ಥಿಕ ಅಗತ್ಯಗಳನ್ನು ಅರಿಯುವ ದೃಷ್ಟಿಯಿಂದ ವಿಕಾಸ್ ಬ್ಯಾಂಕಿನ 22 ಸಿಬ್ಬಂದಿಗಳು ಮನೆ ಮನೆಗೆ ಅಂಗಡಿಗಳಿಗೆ ತೆರಳಿ ಅಭಿಯಾನವನ್ನ ಆರಂಭಿಸಿದ್ದಾರೆ ಗದಗ ಜನತೆ ಇದರ ಪ್ರಯೋಜನ ಪಡೆಯಬಹುದು ಎಂದ್ರು. ಸುದ್ದಿಗೋಷ್ಟಿಯಲ್ಲಿ ನಿರ್ದೆಶಕರಾದ ಎಂ ವೆಂಕಪ್ಪ, ಅಮೃತ್ ಜೋಶಿ, ಮಾಜಿ ನಿರ್ದೆಶಕರಾದ ಅನಂತ ಜೋಶಿ, ಸತ್ಯನಾರಾಯಣರಾವ್, ಕೇಂದ್ರ ಕಚೇರಿ ವ್ಯವಸ್ಥಾಪಕರಾದ ಅಶ್ವಿನಿ ದೇಸಾಯಿ, ಗದಗ ಶಾಖಾ ವ್ಯವಸ್ಥಾಪಕರಾದ ಗಣೇಶ ಪಾಟೀಲ್, ಗಜೇಂದ್ರಗಡ ಶಾಖಾ ವ್ಯವಸ್ಥಾಪಕರಾದ ಸುಷ್ಮಾ ಸೋಮರಡ್ಡಿ ಉಪಸ್ಥಿತರಿದ್ದರು.