ಬೆಂಗಳೂರು/ ಅಯೋಧ್ಯೆ:- ಮಾನವ ಕಲ್ಯಾಣಕ್ಕೆ ಶ್ರಮಿಸಿದ್ದ, ಜನರಿಗೆ ಸನ್ಮಾರ್ಗ ತೋರಿರುವ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಾಳೆ ಅಯೋಧ್ಯೆಯಲ್ಲಿ ನಡೆಯಲಿದೆ.
ಮಂಜೂರಾಗದ ಕಾಮಗಾರಿ ಬಿಲ್: ಪೆಟ್ರೋಲ್ ಕ್ಯಾನ್ ಹಿಡಿದು ಗ್ರಾಪಂ ಸದಸ್ಯೆ ಹೈಡ್ರಾಮಾ!
ಬೆಂಗಳೂರು ವಿಭೂತಿಪುರಮಠದ ವತಿಯಿಂದ ರಾಮಮಂದಿರದಲ್ಲಿ ನಾಳೆ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳಿಂದ ಜಯಂತ್ಯೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಸುಮಾರು 65 ಕ್ಕೂ ಹೆಚ್ಚು ಜನರು ಭಾಗಿಯಾಗಿ ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಿದ್ದಾರೆ.
ಚನ್ನಗೀರಿ ವಿರಕ್ತಮಠದ ಶ್ರೀ ಮನಿಪ್ರ ಡಾ- ಬಸವಜಯಚಂದ್ರ ಸ್ವಾಮಿಜಿಗಳವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.