ಧಾರವಾಡ: ಹೊಸ ಯಲ್ಲಾಪುರದ ರುದ್ರ ಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ ಡದ ಜನರಿಗೆ ಸ್ಮಶಾನ ಭೂಮಿ ಹದ್ದುಬಸ್ತು ಮಾಡಿಕೊಡುವಂತೆ ಧಾರವಾಡ ಜಿಲ್ಲಾ ಮಹಿಳಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಧಾರವಾಡ ಜಿಲ್ಲಾ ಮಹಿಳಾ ಪ್ರಧಾನ ಸಂಚಾಲಕಿ ಶಕುಂತಲಾ ವಾಲಿಕಾರ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು.
ಧಾರವಾಡದ ಹೊಸ ಎಲ್ಲಾಪುರದಲ್ಲಿ ಇರುವಂತಹ ರುದ್ರ ಭೂಮಿಯು ಸಂಪೂರ್ಣ ವಾಗಿ ಹದಗೆಟ್ಟಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹೆಣ ಹೂಳಲು ಸ್ಥಳವೇ ಇಲ್ಲದಂತಾಗಿದ್ದು ದಲಿತರಿಗೆ ಹೆಣ ಹೂಳಲು ಎಲ್ಲಿಂದ ಎಲ್ಲಿಯವರೆಗೆ ಇದೆ ಎಂದು ಅರಿಯಲು ಸ್ಮಶಾನದಲ್ಲಿ ಸ್ಥಳವನ್ನು ಹದಬಸ್ಸು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವರದಿ, ಮಾರುತಿ ಲಮಾಣಿ