ಶ್ರೀನಿವಾಸಪುರ: ಸತತವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ಹಾಗೂ ಟೊಮ್ಯಾಟೊ ಬೆಳೆ ಹಾನಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬದ್ದಿಪಲ್ಲಿ ಪೆದ್ದೂರು ಗ್ರಾಮದ ತಿಪ್ಪಣ್ಣ ಎಂಬುವವರ ಮೂರು ಎಕರೆಯಲ್ಲಿ ಬೆಳೆದಿರುವ ಭತ್ತ ಹಾನಿಯಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತ ಸುಮಾರು ಒಂದು ಲಕ್ಷ ಭತ್ತದ ಬೆಳೆ ಹಾನಿಯಾಗಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ತಿಪ್ಪಣ್ಣಗೆ ನಷ್ಟವಾಗಿದೆ. ಅಷ್ಟೇ ಅಲ್ಲದೆ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಟೊಮೊಟ ಬೆಳೆ ಹಾನಿಯಾಗಿದ್ದು ರೈತರೂ ಕಂಗಾಲಾಗಿದ್ದಾರೆ.
15 ಕೆ ಜಿ ಬಾಕ್ಸ್ ಟೊಮೊಟೊ 800 ರಿಂದ 1000 ರೂಪಾಯಿ ಮಾರಾಟವಾಗುತ್ತಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೋಟದಲ್ಲಿ ನೆಲಕ್ಕೆ ಉದುರುತ್ತಿರುವ ಟೊಮೊಟೊ ಬೆಳೆ, ರೈತರು ಜಾನುವಾರಗಳನ್ನು ಮೇಯಿಸಲು ಸಹ ಪರದಾಟ ನಡೆಸುತ್ತಿದ್ದಾರೆ.