IPl ಸೀಸನ್ 17 ರ ಈ ಲೀಗ್ ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಆರ್ಸಿಬಿ ನಾಲ್ಕನೇ ಬಾರಿ ಸೋಲನುಭವಿಸಿದೆ.
ಅದರಲ್ಲೂ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 183 ರನ್ ಬಾರಿಸಿದರೂ ಆರ್ಸಿಬಿ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ
ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (113) ಅಜೇಯ ಶತಕ ಬಾರಿಸಿದ್ದರು. ಈ ಶತಕದ ನೆರವಿನಿಂದ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಪೇರಿಸಿತು.
184 ರನ್ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ (100) ಅಜೇಯ ಶತಕ ಸಿಡಿಸಿದರು. ಈ ಸೆಂಚುರಿಯೊಂದಿಗೆ 19.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ಗಳಿಂದ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್, ನಾವು ಈ ಪಂದ್ಯದಲ್ಲಿ ಕನಿಷ್ಠ 190 ರನ್ಗಳನ್ನು ಕಲೆಹಾಕಬೇಕಿತ್ತು. ಆದರೆ ಕೊನೆಯಲ್ಲಿ ಎಡವಿದ್ದೆವು. 10 ರಿಂದ 15 ರನ್ಗಳು ಕಡಿಮೆಯಾಯಿತು. ಆರ್ಸಿಬಿ ಸೋಲಿಗೆ ಇದು ಒಂದು ಕಾರಣ ಎಂದರು.
ಇನ್ನು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದನ್ನು ಹೊರಗಳಿದ ಫಾಫ್, ಕ್ಯಾಮರೋನ್ ಗ್ರೀನ್ ಅಥವಾ ದಿನೇಶ್ ಕಾರ್ತಿಕ್ ಆಗಮನದಿಂದ ನಾವು ದೊಡ್ಡ ಮೊತ್ತಗಳಿಸಬಲ್ಲೆವು ಅಂದುಕೊಂಡಿದ್ದೆವು. ಆದರೆ ಪಿಚ್ ಟ್ರಿಕಿ ಆಗಿದ್ದ ಕಾರಣ ಆಡಲು ಸಾಧ್ಯವಾಗಿರಲಿಲ್ಲ. ಸ್ಪಿನ್ನರ್ಗಳನ್ನು ಎದುರಿಸುವುದು ಕಷ್ಟಕರವಾಗಿತ್ತು. ಸಾಕಷ್ಟು ಚೆಂಡುಗಳು ಬ್ಯಾಟ್ನ ಕೆಳಭಾಗಕ್ಕೆ ಬಡಿಯುತ್ತಿದ್ದವು ಎಂದು ಫಾಫ್ ಹೇಳಿದ್ದಾರೆ.
ಇನ್ನು ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು ಎಂಬುದನ್ನು ಒಪ್ಪಿಕೊಂಡ ಫಾಫ್ ಡುಪ್ಲೆಸಿಸ್, ನಮ್ಮ ಸೋಲಿಗೆ ಮುಖ್ಯ ಕಾರಣ ಇಬ್ಬನಿ. ಸೆಕೆಂಡ್ ಇನಿಂಗ್ಸ್ ವೇಳೆ “ಇಬ್ಬನಿ” ಇದ್ದ ಕಾರಣ ಬೌಲಿಂಗ್ ನಡೆಯಲಿಲ್ಲ ಎಂದರು.