ಬೆಂಗಳೂರು : ಹಾಸನ ಪೆನ್ʼಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಏನು ಚರ್ಚೆ ಮಾಡಿದ್ದಾರೆ? ಎಂಬ ಬಗ್ಗೆ ಹಾಸನಾಂಬ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
” ಇದು ಪ್ರಪಂಚದ ಅತ್ಯಂತ ದೊಡ್ಡ ಲೈಂಗಿಕ ಪ್ರಕರಣವಾಗಿದೆ. ಹಿಂದೂ ಮಹಿಳೆಯರ ಮಾಂಗಲ್ಯ ಹರಣ ಮಾಡಿದ ಇನ್ನೊಂದು ಪ್ರಕರಣ ತೋರಿಸಿ. ವ್ಯವಸ್ಥಿತವಾಗಿ ಒಂದು ಜಿಲ್ಲೆಯಲ್ಲಿ ಮನೆಗೆ ನುಗ್ಗಿ ಮಹಿಳೆಯರ ಮಾನಹರಣ, ಶೀಲಹರಣ, ಮಾಂಗಲ್ಯ ದೋಚಲಾಗಿದೆ ” ಎಂದು ವಾಗ್ದಾಳಿ ನಡೆಸಿದರು. ಮಹಿಳೆಯರ ಮಾನ ಹರಣ ಮಾಡಿದವರಿಗೆ ಶಿಕ್ಷೆ ಆಗಬೇಕು. ಮಾನ ಹರಣ ಮಾಡಿದ್ದು,
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಮನೆ ಹರಣ ಮಾಡಿದ್ದ ಅಪರಾಧ ಅಲ್ಲ. ಬದಲಾಗಿ ಇದರ ಬಗ್ಗೆ ಮಾತನಾಡಿದ್ದು ಅಪರಾಧ ಆಗಿದೆ. ಇದರ ಬಗ್ಗೆ ಚರ್ಚೆ ಆಗ್ತಿದೆ. ಮೂಲ ಪ್ರಕರಣ ಕಣ್ಮರೆ ಆಗ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಲೈಂಗಿಕ ದೌರ್ಜನ್ಯ ಎಸಗಿದವರನ್ನು ಬಚಾವು ಮಾಡುವ ಪ್ರಯತ್ನ ಆಗ್ತಿದೆ. ಇದು ಸರ್ಜಿಕಲ್ ಸ್ಕ್ರೈಕ್ ಮಾದರಿಯಲ್ಲಿ ವ್ಯವಸ್ಥಿತ ಸಂಚು ಆಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.