ಬೆಂಗಳೂರು: ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪಿರೋ ಘಟನೆಗೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಸಾವಿಗೆ ಸರ್ಕಾರವೇ ಕಾರಣ ಅಂತ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಗ್ಯಾರಂಟಿ ಅಂತ ಹೇಳಿಕೊಂಡು ಕುಡಿಯೋ ನೀರು ಕೊಡ್ತಿಲ್ಲ. ಕಲುಷಿತ ನೀರು ಕುಡಿಯೋ ಸ್ಥಿತಿ ಬಂದಿದೆ. ಸಿಎಂ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಜನರಿಗೆ ಸಮಸ್ಯೆ ಆಗಿದೆ. ಕುಡಿಯೋ ನೀರು ಕೊಡೋ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ವಾಗ್ದಾಳಿ ನಡೆಸಿದರು.
ಇವತ್ತು ತುಮಕೂರಿನಲ್ಲಿ ಇದೇ ರೀತಿ ಸಾವು ಆಗಿದೆ. ಡಿಸಿಗೆ ಮಾತಾಡಿದ್ರೆ ನೀರಿನ ಸಮಸ್ಯೆ ಇಲ್ಲ ಅಂತಿದ್ದಾರೆ.ಅವರಿಗೆ ಆರೋಗ್ಯ ಸಮಸ್ಯೆಯಿಂದ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಡಿಸಿಗೆ ವರದಿ ಕೇಳಿದ್ದೇನೆ, ಸತ್ತವರಿಗೆ ಒಂದೊಂದು ಆರೋಗ್ಯ ಸಮಸ್ಯೆ ಅಂತ ಹೇಳಿದ್ದಾರೆ. ಕೊಪ್ಪಳದಲ್ಲೂ ಹೀಗೆ ಆಗಿದೆ. ಇಡೀ ರಾಜ್ಯದಲ್ಲಿ ಕಲುಷಿತ ನೀರು ಕುಡಿದು ಜನ ಸಾಯ್ತಿದ್ದಾರೆ. ಕರ್ನಾಟಕ ಸರ್ಕಾರ ಪಾಪರ್ ಆಗಿರೋದಕ್ಕೆ ಇದು ಉದಾಹರಣೆ.
6 ತಿಂಗಳಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸುವ ಬೆಳ್ಳುಳ್ಳಿ ಬಗ್ಗೆ ಇಲ್ಲಿದೆ ಮಾಹಿತಿ.!
ಟ್ಯಾಂಕರ್ ಶುದ್ಧ ಮಾಡೋಕು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಏನಾದರೂ ಕೇಳಿದ್ರೆ ಗ್ಯಾರಂಟಿ ಗ್ಯಾರಂಟಿ ಅಂತಾರೆ. ಕಲುಷಿತ ನೀರು ಕುಡಿದವರ ಸಾವಿಗೆ ಸರ್ಕಾರವೇ ನೇರ ಹೊಣೆ. ಸಿಎಂ ಅವರೇ ಉತ್ತರ ಕೊಡಬೇಕು. ನಿಮ್ಮ ನಿರ್ಲಕ್ಷ್ಯವೇ ಕಾರಣ. ಇದು ದೇವರಿಂದ ಆಗಿಲ್ಲ. ನಿಮ್ಮಿಂದ ಸಾವು ಆಗಿರೋದು ಅಂತ ವಾಗ್ದಾಳಿ ನಡೆಸಿದರು.