ಸದಾಪುಷ್ಪವೆಂದರೆ ಸದಾ ಅರಳುವ ಹೂವು . ಇದನ್ನು ಹಿಂದಿಯಲ್ಲಿ ಸದಾಬಹಾರ್ ಆಂಗ್ಲ ಭಾಷೆಯಲ್ಲಿ ಮದಗಾಸ್ಕರ್ ಪೇರಿವಿಂಕಲ್ , ಪಂಜಾಬಿಯಲ್ಲಿ ರತನ್ ಜೋತ್ , ಮರಾಠಿಯಲ್ಲಿ ಸದಾ ಫೂಲ್ , ಬೆಂಗಾಲಿಯಲ್ಲಿ ನಯನತಾರ , ಮಲಯಾಳಂ ನಲ್ಲಿ ಉಷಾಮಲಾರಿ , ಸಂಸ್ಕೃತ ದಲ್ಲಿ ನಿತ್ಯಕಲ್ಯಾಣಿ , ಕನ್ನಡದಲ್ಲಿ ಮಸಣದ ಹೂವು , ಸಣ್ಣ ಕಣಗಿಲೆ ಎಂದು ಕರೆಯಲ್ಪಡುವ ಈ ಹೂವಿನಲ್ಲಿರುವ ಔಷಧೀಯ ಗುಣ ಅದೆಷ್ಟೋ ಖಾಯಿಲೆಗಳಿಗೆ ರಾಮಬಾಣವಾಗಿದೆ. ಇದು ಹೆಚ್ಚಾಗಿ ಭಾರತದಲ್ಲಿ ಕಂಡುಬರುತ್ತದೆ. ಇದನ್ನು ಬೆಳೆಸಲು ಕಡಿಮೆ ನೀರು ಸಾಕು. ಇದರ ಬುಡ ಒಣಗಿದಾಗ ಮಾತ್ರ ನೀರು ಹಾಕಿದರಾಯಿತು. ಇದು ಮಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಇದಕ್ಕೆ ಸೂರ್ಯನ ಬೆಳಕು ಬೇಕು.
ಕೇವಲ ನಮ್ಮ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಮಾತ್ರವಲ್ಲದೆ ಚೀನಾ ದೇಶದವರು ಸಹ ತಮ್ಮ ಜನರ ಮಧುಮೇಹ, ಮಲೇರಿಯಾ, ಗಂಟಲು ನೋವು, ಲುಕೇಮಿಯಾ ಆರೋಗ್ಯ ಸಮಸ್ಯೆಗಳಿಗೆ ಕಾಶಿ ಗಣಗಲೆ ಗಿಡದ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದಾಪುಷ್ಪ ಗಿಡದಲ್ಲಿ ಎರಡು ಬಗೆಯ ಸಕ್ರಿಯ ಅಂಶಗಳಿದ್ದು, ಅವುಗಳನ್ನು ‘ ಆಲ್ಕಲಾಯ್ಡ್ ‘ ಮತ್ತು ‘ ಟ್ಯಾನಿನ್ ‘ ಎಂದು ಕರೆಯುತ್ತಾರೆ. ಈ ಗಿಡದಲ್ಲಿ ಇಂತಹ ನೂರಾರು ಆಲ್ಕಲೈನ್ ಅಂಶಗಳು ಲಭ್ಯವಿದ್ದು, ಒಂದೊಂದಕ್ಕೂ ಅದರದೇ ಆದ ಕಾಯಿಲೆಯನ್ನು ಗುಣಪಡಿಸುವಂತಹ ಗುಣ ಮತ್ತು ಲಕ್ಷಣಗಳಿವೆ.
![Demo](https://ainlivenews.com/wp-content/uploads/2023/12/spoorthi-1.jpg)
ವಿಂಕಾ ಸಸ್ಯವೆಂದು ಕರೆಯುವ ಸದಾಪುಷ್ಪವನ್ನು ಆಯುರ್ವೇದದಲ್ಲೂ ಮತ್ತು ಆಧುನಿಕ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಈ ಗಿಡವನ್ನು ಕ್ಯಾನ್ಸರ್ ನಂತಹ ಖಾಯಿಲೆಗಳಿಗೆ ಉಪಯೋಗಿಸುತ್ತಾರೆ. ಗಾಯವಾದ ಜಾಗಕ್ಕೆ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅರಶಿನದ ಜೊತೆ ನುಣ್ಣಗೆ ಅರೆದು ಅದರ ಲೇಪವನ್ನು ಗಾಯವಾದ ಜಾಗಕ್ಕೆ ದಿನದಲ್ಲಿ ಎರಡರಿಂದ ಮೂರು ಬಾರಿ ಹಚ್ಚಿದರೆ ಗಾಯ ಕೂಡಲೇ ವಾಸಿಯಾಗುತ್ತದೆ.
ಸದಾಪುಷ್ಪದ ಬೇರನ್ನು ತೆಗೆದುಕೊಂಡು ತೊಳೆದು ನೆರಳಿನಲ್ಲಿ ಒಣಗಿಸಿ ಸಣ್ಣಗೆ ಪುಡಿಮಾಡಿ ಒಂದರಿಂದ ಎರಡು ಚಿಟಿಕಿಯಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ತಿಂದರೆ ಸಕ್ಕರೆ ಖಾಯಿಲೆಯು ಹತೋಟಿಗೆ ಬರುತ್ತದೆ. ಅಧಿಕ ರಕ್ತದ ಒತ್ತಡ ಇದ್ದವರು ಪ್ರಾರಂಭದ ಸಮಯದಲ್ಲಿ ಬಿಳಿ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅದರ ರಸ ತೆಗೆದು ಬೆಳಗ್ಗೆ ಅಥವಾ ರಾತ್ರಿ ಎರಡರಿಂದ ಮೂರು ಸಣ್ಣ ಚಮಚದಷ್ಟು ತೆಗೆದುಕೊಂಡರೆ ಅಧಿಕ ರಕ್ತದೊತ್ತಡ ಹಿಡಿತದಲ್ಲಿ ಬರುತ್ತದೆ .
ಮುಟ್ಟಿನ ಸಮಸ್ಯೆ ಇದ್ದವರು ಆರರಿಂದ ಎಂಟು ಎಲೆಗಳನ್ನು ತೆಗೆದು ತೊಳೆದು ಎರಡು ಲೋಟ ನೀರಿನೊಂದಿಗೆ ಕುದಿಸಿ ಅದು ಅರ್ಧ ಲೋಟ ಆಗುವರೆಗೆ ಕುದಿಸಿ ಸತತ ಮೂರು ತಿಂಗಳ ಕಾಲ ತೆಗೆದು ಕೊಂಡರೆ ಅಧಿಕ ರಕ್ತ ಸ್ರಾವ ಮತ್ತು ಅಲ್ಪ ಹರಿವು ಇದ್ದಲ್ಲಿ ಸರಿಯಾಗುತ್ತದೆ. ಮೂಗಿನಿಂದ ರಕ್ತ ಸ್ರಾವ ಆಗುತ್ತಿದ್ದರೆ ಸದಾಪುಷ್ಪ ಮತ್ತು ಎಳ ದಾಳಿಂಬೆಯ ರಸವನ್ನು ತೆಗೆದು ಮೂಗಿಗೆ ಹಾಕಿದರೆ ಮೂಗಿನಿಂದ ಆಗುವ ರಕ್ತಸ್ರಾವ ಗುಣವಾಗುತ್ತದೆ, ಅಲ್ಲದೆ ಗಂಟಲು ಕೆರೆತ, ಬಾಯಿ ಹುಣ್ಣು, ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರು ಗುಣವಾಗುತ್ತದೆ.
ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯ ರಸ ತೆಗೆದು ಹಚ್ಚಿದರೆ ಊತ ಹಾಗು ತುರಿಕೆ ಕಡಿಮೆ ಆಗುತ್ತದೆ . ಮುಖದಲ್ಲಾದ ಮೊಡವೆ ಗಾಯಗಳಿಗೆ ಸಮಪ್ರಮಾಣದಲ್ಲಿ ಸದಾಪುಷ್ಪದ ಎಲೆ ಕಹಿಬೇವಿನ ಎಲೆ , ಹಾಗು ಅರಶಿನವನ್ನು ತೆಗೆದುಕೊಂಡು ಅದರ ಲೇಪವನ್ನು ಮೊಡವೆ ಇದ್ದ ಜಾಗಕ್ಕೆ ಮತ್ತು ಗಾಯಗಳಾದ ಜಾಗಕ್ಕೆ ಪ್ರತಿ ದಿನ ಹಚ್ಚಿದರೆ ಒಳ್ಳೆಯ ಫಲಿತಾಂಶ ದೊರೆಯಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)