ರಾಹುಲ್ ಗಾಂಧಿಯವರು ತಮ್ಮ ಕ್ಷೇತ್ರದಲ್ಲಿ ನಿಲ್ಲೋಕೆ ತಯಾರಿಲ್ಲ. ಅವರು ಕೇರಳದಲ್ಲಿ ಚುನಾವಣೆಗೆ ನಿಲ್ಲೋಕೆ ಹೋಗ್ತಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ನಾವು ಎನ್.ಡಿ.ಎ ಜೊತೆಗೆ ಸೇರಿದ ಬಳಿಕ ನಮ್ಮಲ್ಲಿರುವ ಒಬ್ಬರೇ ಒಬ್ಬರು ಅಲ್ಪಸಂಖ್ಯಾತರು ನಮ್ಮ ಪಕ್ಷ ಬಿಟ್ಟು ಹೋಗಿಲ್ಲ.
ನಮ್ಮಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ರು ಕೂಡ ಅದನ್ನು ಮರೆತು ನಾವು ಮೈತ್ರಿ ಧರ್ಮವನ್ನು ಪಾಲಿಸುವ ಕೆಲಸ ಮಾಡಬೇಕು ಎಂದು ದೇವೇಗೌಡರು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದ ಮುಖಂಡರಿಗೆ ಕರೆ ಕೊಟ್ಟಿದ್ದಾರೆ.
ನಾನು ಕೂಡ ನಮ್ಮ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೆಲ್ದಾಳೆರವರಿಗೆ ಎಲ್ಲರೂ ಸೇರಿ ಜಂಟಿಯಾಗಿ ಕಾರ್ಯಕ್ರಮ ಮಾಡೋಣ ಅಂತ ಹೇಳಿದ್ದಿನಿ. ಕಾರ್ಯಕರ್ತರ ಸಮಾವೇಶ ಮಾಡೋಣ ಎಂದು ಕೂಡ ಹೇಳಿದ್ದೇನೆ. ಯಾರ್ ಏನೇ ಅಂದ್ರು ಕೂಡ ನಾವು ಎನ್.ಡಿ.ಎ ಅಭ್ಯರ್ಥಿ ಭಗವಂತ ಖೂಬಾರವರ ಪರವಾಗಿ ನಿಷ್ಠೆಯಿಂದ ಕೆಲಸ ಮಾಡೋಣ. ನಮ್ಮ ಅಭ್ಯರ್ಥಿಯಾಗಿರುವ ಖೂಬಾರವರನ್ನು ಮೊದಲಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿ ಕಳಿಸುವ ಕೆಲಸ ನಾವು ಮಾಡೋಣ ಎಂದು ನಾನು ನಮ್ಮ ಮುಖಂಡರಿಗೆ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಕ್ರೆಡಿಟ್ ಕಾರ್ಡ್ʼದಾರರಿಗೆ ಬಿಗ್ ಅಪ್ಡೇಟ್..! ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆ
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಖೂಬಾ, ಶಾಂತಲಿಂಗ ಸಾವಳಗಿ, ವಿಜಯಕುಮಾರ್ ಖಾಶೆಂಪುರ್, ದೇವೆಂದ್ರ ಸೋನಿ, ಐಲಿಂಜಾನ್ ಮಠಪತಿ, ಲಲಿತಾ ಕರಂಜೆ, ಸುರೇಶ್ ಸಿಗಿ, ನಬಿ ಖುರೇಷಿ, ಸೈಯದ್ ಯಶ್ರಬ್ ಅಲಿ ಖಾದ್ರಿ, ಸೈಜದ್ ಸಾಹೇಬ್, ಸಂಜುಕುಮಾರ್ ಯಾಕಾಪೂರ್, ರಾಜು ಕಡ್ಯಾಳ, ರಾಜಶೇಖರ ಜವಳೆ, ಶಿವಪುತ್ರ ಮಾಳ್ಗೆ, ಬೊಮ್ಮಗೊಂಡ ಚಿಟ್ಟಾವಾಡಿ, ತಾನಾಜಿ ತೋರಣೇಕರ್, ಸುರ್ಯಕಾಂತ್ ದಂಡಿ, ಜಾಪಟ್ ಕಡ್ಯಾಳ್, ಅಭಿ ಕಾಳೆ, ಸಂಗು ಚಿದ್ರಿ, ರಾಜು ಚಿಂತಾಮಣಿ, ಸುಶೀಲ್ ಅವಸ್ತಿ, ಶ್ರೀನಿವಾಸ್ ಕಟ್ಗಿ, ರಾಜು ಪತ್ತಾರ್, ಗೌತಮ್ ಸಾಗರ್, ಆಕಾಶ್ ಕಂಡಾಳೆ, ಸಿದ್ರಾಮಪ್ಪ ಹಳ್ಳಿಖೇಡ್, ಸುಂದರರಾಜ್ ಮಾಳ್ಗಾವ್ ರವರು ಸೇರಿದಂತೆ ಅನೇಕರಿದ್ದರು.