ಬಳ್ಳಾರಿ:- ಗಣಿನಾಡು ಬಳ್ಳಾರಿಯಲ್ಲಿ ದಿನೇ ದಿನೇ ಕಳ್ಳರ ಕೈಚಳಕ ಹೆಚ್ಚುತ್ತಿದೆ. ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಎಚ್.ಆರ್.ಗವಿಯಪ್ಪ ಸರ್ಕಲ್ನಲ್ಲಿ ಕಳ್ಳತನ ನಡೆದಿದೆ.
ಬಳ್ಳಾರಿಯ ಮೋತಿ ವೃತ್ತದ ಹತ್ತಿರದ ಮೊಬೈಲ್ ಶಾಪ್’ನಲ್ಲಿ ಕಳ್ಳತನ ನಡೆದಿದ್ದು, ಸುಮಾರು 20 ಲಕ್ಷ ರೂ ಬೆಲೆ ಬಾಳುವ ಮೊಬೈಲ್ ಕಳ್ಳತನ ನಡೆದಿದೆ. ವಿವಿಧ ಕಂಪನಿಯ ಬೆಲೆ ಬಾಳುವ ಮೊಬೈಲ್ ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಇಂದು ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಕಳ್ಳತನವಾಗಿದ್ದು, ಅಂಗಡಿಯ ಶಟರ್ ಹೊಡೆದು ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)