ಕೋಲಾರ:- ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗದ್ದಲ ಕೋಲಾಹಲ ನಡೆದಿರುವ ಘಟನೆ ಕೋಲಾರ ಪ್ರವಾಸಿ ಮಂದಿರದ ಮುಂದೆ ಜರುಗಿದೆ.
Gadaga: ವಿಕ್ಕಿ ಚಲನಚಿತ್ರದ ಪೊಸ್ಟರ್ ಬಿಡುಗಡೆ..!
ಸರ್ಕಾರದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸದ ಕಾರಣ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಮೇಲಿದ್ದ ಮುಖಂಡರನ್ನು ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಇದೆ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ದ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ತಕರ್ತರು ನಡುವೆ ಮಾತಿನ ಚಕಮಿಕಿ ನಡೆದಿದ್ದು, ವೇದಿಕೆ ಮೇಲಿದ್ದ ಎಂಎಲ್ ಸಿ ಅವರಿಂದ ಸಮಾಧಾನಪಡಿಸುವ ಯತ್ನ ನಡೆದಿದೆಯಾದರೂ ಈ ಸಂದರ್ಭದಲ್ಲಿ ಗದ್ದಲ, ತಳ್ಳಾಟ, ನೂಕಾಟ ನಡೆದಿದೆ. ವೇದಿಕೆ ಮೇಲಿದ್ದ ಆದಿಚುಂಚನಗಿರಿ ಶಾಖಾ ಮಠದ ಮಂಗಳಸ್ವಾಮೀಜಿಗಳಿಂದ ಸಮಾಧಾನ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಗಿತ್ತು.
![](https://ainlivenews.com/wp-content/uploads/2024/01/Ad-Banner-copy-scaled.jpg)