ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ತಾಪಮಾನಕ್ಕೆ ಐಟಿ ಸಿಟಿ ಜನ್ರು ಬೆಂದು ಹೋಗಿದ್ದು, ಮಳೆಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ನಗರದಲ್ಲಿ ಒಂದು ಹನಿ ಕೂಡ ಮಳೆಯಾಗಿಲ್ಲ ಹೀಗಿರುವಾಗ ಬಿಸಿಲಿನ ಬೇಗೆಗೆ ಬೇಸತ್ತ ಜನರಿಗೆ ಈಗ ಬಿಸಿ ಗಾಳಿ ಬೆಂಬಿಡದೆ ಕಾಣ್ತಾ ಇದೆ..
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ಇದು ಪ್ರಸಕ್ತ ಏಪ್ರಿಲ್ ತಿಂಗಳಿನಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ. ಮಾರ್ಚ್ ಕೊನೆಯ ವಾರದಿಂದ ನಗರದ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಕಳೆದ 6 ದಿನದ ಗರಿಷ್ಠ ಉಷ್ಣಾಂಶ ಮಾಡುವುದಾದರೆ
ಏಪ್ರಿಲ್ 21 :- 37.4
ಏಪ್ರಿಲ್ 22:- 37.2
ಏಪ್ರಿಲ್ 23:- 37.6
ಏಪ್ರಿಲ್ 24:- 37.6
ಏಪ್ರಿಲ್ 25:- 37.4
ಏಪ್ರಿಲ್ 26:- 37.4
ಹೌದು… ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಬಾರಿಗೆ 37 ಡಿಗ್ರಿ ಸೆಲ್ಸಿಯಸ್ನ ಗಡಿ ದಾಟಿತ್ತು. ಏ.6ರಂದು 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ನಗರದಲ್ಲಿ ಎಂಟು ವರ್ಷದ ಏಪ್ರಿಲ್ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿತ್ತು. ಬಳಿಕ ಅದೇ ಆಸು ಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು.
ಮತದಾನ ನಡೆದ ಶುಕ್ರವಾರ ಹಾಗೂ ಮತದಾನ ಪೂರ್ವ ದಿನ ಗುರುವಾರವೂ 37.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ ನಗರದಲ್ಲಿ ಬಿಸಿ ಗಾಳಿ ಬೀಸಿದ ಅನುಭವ ಉಂಟಾಗಿದೆ.. ಒಟ್ಟಿನಲ್ಲಿ ವಾಡಿಕೆಯಂತೆ ಏಪ್ರೀಲ್ ತಿಂಗಳಲ್ಲಿ ಇಷ್ಟೊತ್ತಿಗಾಗಲೆ ಮಳೆ ಆಗಬೇಕಿತ್ತು, ಆದರೆ ಈ ವರೆಗೆ ಒಂದು ಹನಿ ಕೂಡ ಮಳೆ ಹನಿ ಬೆಂಗಳೂರು ನಗರದಲ್ಲಿ ಬಿದ್ದಿಲ್ಲ. ಇತ್ತ ಬಿಸಿಲಿನ ತಾಪಕ್ಕೆ ಬೆಂದಕಾಳೂರು ಮಂದಿ ಬೆಂದು ಹೋಗ್ತಾ ಇದ್ದಾರೆ.