ಕೋಲಾರ: – ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಸಿಎಂ ಸೀಟು ಖಾಲಿ ಇಲ್ಲ, ಇಲ್ಲಿ ನಾವು ಕುಳಿತಿರುವ ಸೀಟೇ ಖಾಲಿ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು,
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ನಾವು ಕುಳಿತಿರುವ ಸೀಟು ಖಾಲಿ ಇಲ್ಲ ನಾವು ಎದ್ದು ಹೋದ ಮೇಲೆ ಏನಾದರು ನೋಡೋಣ. ನಾವು ಎದ್ದು ಹೋಗುವ ಪರಿಸ್ಥಿತಿ ಇಲ್ಲ ಹಾಗಾಗಿ ಸಿಎಂ ಸೀಟು ಖಾಲಿ ಇಲ್ಲ ಎಂದು ಹೇಳಿದರು. ಬೆಳಗಾವಿಯಲ್ಲಿ ಗಾಂಧಿ ಕುರಿತು ಒಂದು ದೊಡ್ಡ ಕಾರ್ಯಕ್ರಮವಿದೆ ಹಾಗಾಗಿ ಸತೀಶ್ ಜಾರಕಿಹೊಳಿವರು ಅಲ್ಲಿ ಉಸ್ತುವಾರಿ ಮಂತ್ರಿಗಳಿದ್ದಾರೆ ಅದೇ ಜಿಲ್ಲೆಯವರಿದ್ದಾರೆ ಬೆಳಗಾವಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಕುರಿತು ಮಾತನಾಡಲು ಹೋಗಿದ್ದಾರೆ ಎಂದರು.
ನಮ್ಮ ವಿರೋಧ ಪಕ್ಷದವರು ಅದನ್ನು ಈ ರೀತಿಯಾಗಿ ಬಿಂಬಿಸುತ್ತಿದ್ದಾರೆ ಅಷ್ಟೇ ಅವರು ಹೇಳುತ್ತಿದ್ದರೆ ನಾವು ಕರೆಕ್ಟಾಗಿ ಹುಷಾರು ಹಾಗುತ್ತೆವೆ. ಹಾಗೆಲ್ಲ ಯಾಕೆ ಕನಸು ಕಾಣುತ್ತಿರಿ ರಾಜ್ಯದಲ್ಲಿ ಸಿಎಂ ಬದಲಾದ್ರೆ ಇಳಿದ್ರೆ ಅದೆಲ್ಲವು ಬೇಡ ಶೇಕಡಾ ನೂರರಷ್ಟು ಏನೂ ಹಾಗುವುದಿಲ್ಲ ನೀವು ತಲೆ ಕೆಡಿಸಿಕೊಳ್ಳ ಬೇಡಿ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಸಿದ್ದರಾಮಯ್ಯ ಅವರ ಸೀಟು ಕರೆಕ್ಟೆ ಆಗಿದೆ. 5 ವರ್ಷ ಅವರೆ ರಾಜ್ಯದಲ್ಲಿ ಸಿಎಂ ಆಗಿರುತ್ತಾರೆ ಎನೂ ಸಮಸ್ಯೆಯಾಗಲ್ಲ ಎಂದು ತಿಳಿಸಿದ್ರು.