ಬೆಂಗಳೂರು : ಮಾಧುಸ್ವಾಮಿ ಮಾಧುಸ್ವಾಮಿ ಅಂತೀರಲ್ಲ. ಮಾದಪ್ಪನೇ ನನ್ನ ಜೊತೆ ಇದ್ದಾನೆ, ಸಿದ್ದಗಂಗಾ ಸ್ವಾಮಿಯೇ ನನ್ನ ಜೊತೆ ಇದಾರೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಗರಂ ಆದರು.
![Demo](https://ainlivenews.com/wp-content/uploads/2023/12/spoorthi-1.jpg)
ಬಿಜೆಪಿ, ಜೆಡಿಎಸ್ ಮನಸ್ಸು ಹಾಲು ಜೇನು ಇದ್ದ ಹಾಗೆ: ಡಾ.ಸಿ.ಎನ್. ಮಂಜುನಾಥ್
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ, ಮಾಧುಸ್ವಾಮಿ ಯಾಕಪ್ಪ? ಪ್ರಚಾರಕ್ಕೆ ಅವರು ಬರಲಿ ಬಿಡಲಿ, ಯಾರಿಗೂ ಬನ್ನಿ ಅಂತ ಬಲವಂತ ಮಾಡಲ್ಲ. ನಾನು ನಾಮಪತ್ರ ಸಲ್ಲಿಕೆ ಮಾಡ್ತಿದ್ದೇನೆ ಎಂದು ಹೇಳಿದರು.
ಒಬ್ಬ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ. ಆದರೆ, ಮಾದಪ್ಪನೇ ನಮ್ಮ ಜೊತೆಯಲ್ಲಿ ಇದ್ದಾನೆ. ಅವರೂ ಮುಂದೊಂದು ದಿನ ಬರ್ತಾರೆ. ನಾಳೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕರ ಆರ್. ಅಶೋಕ್ ಬರ್ತಾರೆ ಎಂದು ತಿಳಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)